ಬೆಳ್ತಂಗಡಿ: 2025 ಜೂ.12ರಂದು ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ AI171 ರ ದುರಂತ ಅಪಘಾತದ ಬಗ್ಗೆ ಬೆಳ್ತಂಗಡಿ ಧರ್ಮಪ್ರಾಂಥ್ಯವು ತೀವ್ರ ದುಃಖವನ್ನು ವ್ಯಕ್ತಪಡಿಸಿದೆ. 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಲಂಡನ್ಗೆ ಹೊರಟಿದ್ದ ವಿಮಾನದ ಹೃದಯವಿದ್ರಾವಕ ಘಟನೆಯು ರಾಷ್ಟ್ರವನ್ನು ಶೋಕದಲ್ಲಿ ಮುಳುಗಿಸಿದೆ. “ಈ ವಿನಾಶಕಾರಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಎಲ್ಲರ ಕುಟುಂಬಗಳು ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅಪಾರ ದುಃಖ ಮತ್ತು ನಷ್ಟದ ಈ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ. ಗಾಯಗೊಂಡ ಎಲ್ಲರ ತ್ವರಿತ ಮತ್ತು ಸಂಪೂರ್ಣ ಚೇತರಿಕೆಗಾಗಿ ನಾವು ತೀವ್ರವಾಗಿ ಪ್ರಾರ್ಥಿಸುತ್ತೇವೇ” ಎಂದು ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಹೇಳಿದರು.
ಗುಜರಾತ್ನ ವಿಮಾನ ದುರಂತಕ್ಕೆ ಬೆಳ್ತಂಗಡಿ ಧರ್ಮಪ್ರಾಂಥ್ಯದಿಂದ ಸಂತಾಪ
