Site icon Suddi Belthangady

ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ಬೆಳ್ತಂಗಡಿ ವತಿಯಿಂದ ಧನಸಹಾಯ

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್‌ ಬೆಳ್ತಂಗಡಿ ಇದರ ವತಿಯಿಂದ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ಯಡ್ಕದ ಒಕ್ಕಲಿಗ ಗೌಡ ಸಮಾಜದ ಬಡ ಕುಟುಂಬದ ಸುಬ್ರಾಯ ಗೌಡ ಹತ್ಯಡ್ಕರವರು ಆಸ್ಪತ್ರೆಯ ಬಿಲ್‌ ಪಾವತಿಸಲು ಅಶಕ್ತರಾಗಿದ್ದು, ಈ ಬಗ್ಗೆ ಸೇವಾ ಟ್ರಸ್ಟ್‌ ಗೆ ಮನವಿ ಮಾಡಿದಾಗ ಆ ಕೂಡಲೇ ಸ್ಪಂದಿಸಿ, ಒಕ್ಕಲಿಗ ಸಮುದಾಯದ ಸದಸ್ಯರಿಂದ ಸಂಗ್ರಹಿಸಿದ ರೂ. 30ಸಾವಿರ ಮೊತ್ತವನ್ನು ಟ್ರಸ್ಟಿನ ಹತ್ತನೇ ಸೇವಾ ಯೋಜನೆ ಅಡಿಯಲ್ಲಿ ಚಿಕಿತ್ಸೆಗೊಳಪಟ್ಟ ಸುಬ್ರಾಯ ಗೌಡ ಹತ್ಯಡ್ಕರವರ ಮನೆಗೆ ತೆರಳಿ ಟ್ರಸ್ಟಿನ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಟ್ರಸ್ಟಿನ ಸ್ಥಾಪಕ ಟ್ರಸ್ಟಿಗಳಾದ ರಂಜನ್ ಜಿ. ಗೌಡ, ಶ್ರೀನಿವಾಸ್‌ ಗೌಡ ಬೆಳಾಲು, ಭರತ್ ಗೌಡ ಬಂಗಾಡಿ, ನವೀನ್ ಬಿ.ಕೆ. ವಕೀಲರು, ಸೂರಜ್ ಗೌಡ ವಳಂಬ್ರ ಹಾಗೂ ಟ್ರಸ್ಟಿಗಳಾದ ಸುಂದರ ಗೌಡ ಉಡೈರೆ ಮತ್ತು ಧರ್ಮರಾಜ ಗೌಡ ಅಡ್ಕಡಿ ಉಪಸ್ಥಿತರಿದ್ದರು.

Exit mobile version