Site icon Suddi Belthangady

ಉಜಿರೆ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆ: ನಮ್ಮ ದೈಹಿಕ ಕ್ಷಮತೆ ನಮ್ಮ ಮೂಳೆಯ ಮೇಲೆ ಅವಲಂಬಿತವಾಗಿರುತ್ತದೆ. ಸದೃಢವಾದ ಎಲುಬು ಮತ್ತುಮೂಳೆಗಳಿಂದ ನಮ್ಮ ದೇಹವೂ ಕೂಡ ಸದೃಢವಾಗಿರುತ್ತದೆ. ಅದಕ್ಕಾಗಿ ವರ್ಷಕೊಮ್ಮೆಯಾದರೂ ನಾವು ಇಂಥ ಶಿಬಿರದಲ್ಲಿ ಪಾಲ್ಗೊಂಡು ನಮ್ಮ ಮೂಳೆ ಸಾಂದ್ರತೆಯನ್ನು ಪರೀಕ್ಷಿಸಿ ನಿಖರವಾದ ದೃಢತೆಯನ್ನು ತಿಳಿದುಕೊಂಡು, ತಜ್ಞ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಉಜಿರೆಯ ಬೆನಕ ಹೆಲ್ತ್

ಸೆಂಟರ್‌ನ ವೈದ್ಯಕೀಯ ನಿರ್ದೇಶಕರಾದ (NABH ಪುರಸ್ಕೃತ) ಡಾ. ಗೋಪಾಲಕೃಷ್ಣ ಕೆ ಅವರು ಹೇಳಿದರು.

ಅವರು ಬೆನಕ ಹೆಲ್ತ್ ಸೆಂಟರ್‌ನಲ್ಲಿ ಜೂ.11ರಂದು ನಡೆದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಮಾತನಾಡಿದರು.

ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ಮತ್ತು ಕೈ ಮೈಕ್ರೋಸರ್ಜರಿ ಪರಿಣಿತರಾದ ಡಾ. ರೋಹಿತ್ ಜಿ ಕೆ ಮಾತನಾಡುತ್ತಾ, ನಮ್ಮ ಆರೋಗ್ಯದ ಮೇಲೆ ಮೂಳೆ ಸಾಂದ್ರತೆ ಯಾವ ರೀತಿ ಪರಿಣಾಮ MBBS, MS(Ortho) ಹಾಮ ಬೀರುತ್ತದೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಎಲುಬು, ಮೂಳೆಗಳ ಕಡಿಮೆ ಕ್ಷಮತೆಯಿಂದ ಯಾವ ರೀತಿಯ ಸಮಸ್ಯೆಗಳು ನಮ್ಮ ಶರೀರದ ಮೇಲೆ ಆಗುತ್ತದೆಂದು ವಿವರಣೆ ನೀಡಿದರು.

ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್‌.ಜಿ. ಭಟ್ ಸ್ವಾಗತಿಸಿ ನಿರೂಪಿಸಿದರು. ಡಾ. ಭಾರತಿ ಜಿ.ಕೆ. ಕಾರ್ಯಕ್ರಮದ ಪ್ರಸ್ತಾವನೆಗೈದು, ವಂದಿಸಿದರು.

Exit mobile version