ಮೂಡುಕೋಡಿ: ಶ್ರೀ ರಾಮ ಭಜನಾ ಮಂದಿರದಲ್ಲಿ ಜೂ. 8ರಂದು ಗ್ರಾಮಪಂಚಾಯತ್ ವೇಣೂರು, ಅರಣ್ಯ ಇಲಾಖೆ, ಯುವಸೇವಾ ಸಂಗಮ, ಕಾಟಿ ಅಭಿಮಾನಿ ಬಳಗ, ಶ್ರೀ ಕ್ಷೇ, ಧ. ಗ್ರಾ. ಅ. ಯೋಜನೆ, ಶ್ರೀ ರಾಮ ಭಜನಾ ಮಂದಿರ ಇವರ ಸಹಕಾರದೊಂದಿಗೆ ವನಮಹೋತ್ಸವ ಆಚರಿಸಲಾಯಿತು. ಶ್ರೀ ಗಂಧ, ರಕ್ತ ಚಂದನ, ಮಾವು ಹಲಸು ಸೇರಿದಂತೆ ನೂರು ಗಿಡಗಳ ವಿತರಣೆ ನಡೆಯಿತು.
ಇದೇ ಕಾರ್ಯಕ್ರಮದಲ್ಲಿ ವೇಣೂರು ಗ್ರಾಮ ಪಂಚಾಯತ್ ಶೇ.25ರ ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಕೊಡಮಾಡುವ ಸವಲತ್ತುಗಳ ವಿತರಣೆಯೂ ನಡೆಯಿತು. ಎರಡನೇ ವಾರ್ಡ್ ನ ಎಲ್ಲಾ ಮನೆಗಳಿಗೆ ವಿಡಿಯೋ. ವಿ. ಗಾರ್ಡ್ ಕಂಪನಿಯ ಮಿಕ್ಸಿ ಹಾಗೂ ಒಂದನೇ ವಾರ್ಡ್ ನ ಎಲ್ಲಾ ಮನೆಗಳಿಗೆ ಚೇರ್ ವಿತರಣೆ ಮಾಡಲಾಯಿತು.
ಅಲ್ಲದೇ ವಿಜೇತ ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿ ಮೂಡುಕೋಡಿಯ ಸುಪ್ರಿಯಾರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಸಹಕಾರ ಸಂಘದ ಅಧ್ಯಕ್ಷ, ಪಂ. ಸದಸ್ಯ ಸುಂದರ ಹೆಗ್ಡೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ವಕೀಲ ಉಮೇಶ್ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.