ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ಇದರ 37ನೇ ವರುಷದ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ವಿಘ್ನೇಶ್ವರ ಕಲಾ ಮಂದಿರದಲ್ಲಿ ನಡೆಯಿತು. 37ನೇ ವರ್ಷದ ಅಧ್ಯಕ್ಷರಾಗಿ ಅಶೋಕ್ ಶೆಟ್ಟಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಗಣೇಶ್ ಆರ್. ರಾಘವೇಂದ್ರನಗರ, ಕೋಶಾಧಿಕಾರಿಯಾಗಿ ಗಣೇಶ್ ಶೆಟ್ಟಿ ಸುರುಳಿ, ಉಪಾಧ್ಯಕ್ಷರಾಗಿ ಸುಜಿತ್ ಗುರಿಂಗಾನ, ದಿನೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ್ ಬಿ.ಎಲ್., ಜೊತೆ ಕಾರ್ಯದರ್ಶಿಯಾಗಿ ಪವನ್ ಗಾಂಧಿನಗರ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾಗೇಶ್ ಹೆಗ್ಡೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ರುಕ್ಮಯ್ಯ ಕನ್ನಾಜೆ ಮುಂದುವರಿಸಲಾಯಿತು. ಅನ್ನಸಂತರ್ಪಣೆ ಸಮಿತಿಯ ಸಂಚಾಲಕ ರಾಜೇಶ್ ಶೆಟ್ಟಿ, ಸೀತಾರಾಮ ಹೆಗ್ಡೆ, ಗಂಗಾಧರ ಹೆಗ್ಡೆ, ಹರಿಕೃಷ್ಣ, ಸುರೇಶ್ ಆರ್. ರಾಘವೇಂದ್ರ ನಗರ, ಅಜಯ್ ಶಿವಾಜಿನಗರ, ಭೋಜರಾಜ್ ಪ್ರಗತಿನಗರ ಆಯ್ಕೆಯಾದರು.
ಲಾಯಿಲ: ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ
