ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ.ಆರ್. ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೆ ದಿನದಂದು ಶಾಲೆಯಲ್ಲಿ Eco club ನ್ನು ಕೂಡ ಉದ್ಘಾಟಿಸಲಾಯಿತು. ಬಳಿಕ 10ನೇ ತರಗತಿ ಸಹನರನ್ನು ಅಧ್ಯಕ್ಷ, 9ನೇ ತರಗತಿ ಗೌರವ್ ನನ್ನು ಉಪಾದ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ವಿಶ್ವ ಪರಿಸರ ದಿನಾಚರಣೆ ಮಹತ್ವ ಹಾಗೂ ಪರಿಸರ ಉಳಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳ ಕರ್ತವ್ಯ ಇದರ ಬಗ್ಗೆ ಶಾಲಾ ಮುಕ್ತ ಶಿಕ್ಷಕಿ ಮಾಹಿತಿ ನೀಡಿದರು. ತಾಯಿಯ ಹೆಸರಲ್ಲೊಂದು ಗಿಡ ಅಭಿಯಾನದಡಿ ಗಿಡಗಳನ್ನು ನೆಟ್ಟು ಪೋಷಿಸಿಸಬೇಕೆಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ತಂಡ ಹಲವಾರು ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಟ್ಟು ಸಂತಸಪಟ್ಟರು. ಶಿಕ್ಷಕ ವೃಂದ ಹಾಜರಿದ್ದರು.