Site icon Suddi Belthangady

ಒಂದೇ ದೇಶವಾಗಿದ್ದ ಭಾರತ 1947ರಲ್ಲಿ ಪಾಕಿಸ್ಥಾನ, ಹಿಂದೂಸ್ಥಾನವಾಗಿ ಬೇರೆ ಬೇರೆ ಆಗಿದ್ದೇವೆ

ಜಗತ್ತಿನಾದ್ಯಂತ ಪರಸ್ಪರ ಹೋರಾಡುತ್ತಿದ್ದ ಎಷ್ಟೋ ದೇಶಗಳು ಈಗ ಸೌಹಾರ್ದತೆಯಿಂದ ಬಾಳುತ್ತಿವೆ.
ಒಂದು ದೇಶವಾಗಿದ್ದು ಸೌತ್ ಮತ್ತು ನಾರ್ತ್ ಎಂದು ಒಡೆದು ಹೋಗಿದ್ದ ವಿಯಟ್ನಾ ಇಂದು ಪುನಃ ಒಂದೇ ದೇಶವಾಗಿದೆ.- ಅಭಿಪ್ರಾಯಕ್ಕೆ ಆಹ್ವಾನ

*ಹಾಗಿರುವಾಗ ಒಂದೇ ದೇಶದ ಜನರಾಗಿದ್ದ ನಾವು ಪರಸ್ಪರ ವೈರಿಗಳಾಗಿ ಒಬ್ಬರು ಇನ್ನೊಬ್ಬರ ನಾಶಕ್ಕೆ ಪ್ರಯತ್ನಿಸಬೇಕೇ?. ಪಾಕಿಸ್ಥಾನ ಭಾರತ ಒಂದಾಗಿ ಬದುಕಲು ಸಾಧ್ಯವಿಲ್ಲವೇ?.
*ಭಯೋತ್ಪಾದನೆ, ದ್ವೇಷ ನಿವಾರಿಸಿ ವ್ಯವಹಾರ ಬಾಂಧವ್ಯ ಬೆಳೆಸಿ ಒಂದಾಗಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿಲ್ಲವೇ?
*ಭಾರತದೊಂದಿಗೆ ವೈರತ್ವ, ದ್ವೇಷ ಪಾಕಿಸ್ಥಾನದ ಆಡಳಿತಕ್ಕೆ ಮತ್ತು ಮಿಲಿಟರಿಗೆ ಅವರ ಅಸ್ಥಿತ್ವಕ್ಕಾಗಿ ಬೇಕೇ ಬೇಕು.
*ಪಾಕಿಸ್ಥಾನದ ಜನತೆಗೆ ಭಾರತದ ಜನತೆಗೆ ಅದು ಬೇಕೇ?. ಎರಡು ದೇಶದ ಜನರು ಶಾಂತಿ, ಸೌಹಾರ್ದತೆ ಬಯಸಿದರೆ, ವ್ಯವಹಾರ ಬೆಳೆಸಿದರೆ ಏನಾಗಬಹುದು?. ಪರಸ್ಪರ ಯುದ್ಧ , ಸಾವು ನೋವು, ಕಷ್ಟ ನಷ್ಟ ಕಡಿಮೆಯಾಗಿ ಅಭಿವೃದ್ಧಿ ಖಂಡಿತವಲ್ಲವೇ?
*ಅದಕ್ಕಾಗಿ ಪಾಕಿಸ್ಥಾನದ ಜನತೆ ಭಾರತದ ವಿರೋಧಿಗಳಾಗದೆ ಅವರ ಆಡಳಿತವನ್ನು, ಮಿಲಿಟರಿಯನ್ನು ನಿಯಂತ್ರಿಸಿ ಭಾರತದೊಂದಿಗೆ ಸೌಹಾರ್ದತೆಯಿಂದ ಬಾಳುವಂತೆ ಮಾಡಲು ನಾವು
ಪ್ರಯತ್ನಿಸಲು ಸಾಧ್ಯವಿಲ್ಲವೇ?.
*ಪಾಕಿಸ್ಥಾನದ ಭಯೋತ್ಪಾದನೆ, ಪಾಕಿಸ್ಥಾನದ ಆಡಳಿತ ಮತ್ತು ಮಿಲಿಟರಿಯನ್ನು ಮಾತ್ರ ಗುರಿಯಾಗಿರಿಸಿ ‘ಸಿಂಧೂರ ಆಪರೇಷನ್’ನಲ್ಲಿ ನಾವು ಜಯಗಳಿಸಿರುವಾಗ ಪಾಕಿಸ್ಥಾನದ ಜನರನ್ನು ನಾವು ವಿರೋಧಿಗಳೆಂದು ಪರಿಗಣಿಸದೆ ಅವರನ್ನು (ಅಲ್ಲಿಯ ಆಡಳಿತದ ವಿರೋಧಿಗಳನ್ನಾಗಿ ಮಾಡಿ) ನಮ್ಮ (ಭಾರತದ) ಪರವಾಗಿ ಸೌಹಾರ್ದತೆಗಾಗಿ ನಿಲ್ಲುವಂತೆ ಮಾಡಲು ಈ ಮೇಲಿನ ವಿಷಯ ಉತ್ತಮ ಅವಕಾಶ ಎಂದು ಪರಿಗಣಿಸುವುದು ಒಳಿತಲ್ಲವೇ?
| ಡಾ.ಯು.ಪಿ.ಶಿವಾನಂದ

Exit mobile version