Site icon Suddi Belthangady

ಕೃಷಿಕೂಲಿ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಮಡಂತ್ಯಾರು: ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕೃಷಿಕೂಲಿ ಕಾರ್ಮಿಕ ಗಣೇಶ್ ಅವರು ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪತ್ನಿ ಲಕ್ಷ್ಮೀ ಬಾಬು ಅವರು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಗಣೇಶ್ ಅವರು ಕಳೆಂಜಿಬೈಲಿನ ಅಶ್ರಫ್ ಅವರ ಬಾಡಿಗೆ ಮನೆಯಲ್ಲಿ 9 ತಿಂಗಳಿನಿಂದ ಪಾಸವಾಗಿದ್ದು ತೋಟದ ಕೆಲಸ ಮಾಡಿಕೊಂಡಿದ್ದರು. ಅವರು ಕೌಟುಂಬಿಕ ಕಾರಣದಿಂದ ಬೇಸರಗೊಂಡು ಹೊರಗಡೆ ಹೋದವರು ಕಳೆಂಜೆಬೈಲಿನ ಬಾಡಿಗೆ ಮನೆಯಲ್ಲಿ ತಂದಿಟ್ಟಿದ್ದ ವಿಷ ಸೇವಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಅವರನ್ನು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜೂ. 2ರಂದು ರಾತ್ರಿ ಮೃತಪಟ್ಟಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

Exit mobile version