Site icon Suddi Belthangady

ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ವತಿಯಿಂದ ನಿಡ್ಲೆ ಸ.ಹಿ.ಪ್ರಾ.ಶಾಲೆಯ ಕಟ್ಟಡ ದುರಸ್ಥಿ ಕಾರ್ಯಕ್ಕೆ ರೂ.1ಲಕ್ಷ ಮಂಜೂರು

ನಿಡ್ಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿಡ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುರಸ್ಥಿ ಕಾರ್ಯಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ.1 ಲಕ್ಷದ ಮೊತ್ತದ ಮಂಜೂರಾತಿ ಪತ್ರವನ್ನು ತಾಲೂಕು ಜನಜಾಗೃತಿ ವೇದಿಕೆ ಸದಸ್ಯರು ಕೊರಗಪ್ಪ ಗೌಡ ನಿಡ್ಲೆ ಬೂಡುಜಾಲು, ಕೊಕ್ಕಡ ವಲಯ ಮೇಲ್ವಿಚಾರಕರು ಶ್ರೀಮತಿ ಭಾಗೀರಥಿ, ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಗೌಡ, ಶ್ರೀ ಕ್ಷೇತ್ರ ದರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಡ್ಲೆ ಕಳೆಂಜ ಸಂಯೋಜಕಿ ಆಶಾಲತಾ, ಸದಸ್ಯ ಲಿಂಗಪ್ಪ ಗೌಡ, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮಣ ಗೌಡ, ಒಕ್ಕೂಟದ ಪದಾಧಿಕಾರಿ ವನಿತಾ, ಪುಷ್ಪಲತ, ನಿಡ್ಲೆ ಗ್ರಾಮ ಸೇವಾ ಪ್ರತಿನಿಧಿ ಸೇಸಪ್ಪ ಗೌಡ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಗೌಡ, ಸದಸ್ಯ ಗಿರೀಶ ಎಂ. ಕೆ., ನಿಡ್ಲೆ ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ, ಶಿಕ್ಷಕ ವೃಂದದವರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರವೀಣರವರ ಉಪಸ್ಥಿಯಲ್ಲಿ ವಿತರಿಸಲಾಯಿತು.

Exit mobile version