Site icon Suddi Belthangady

ಪುತ್ತಿಲಗುತ್ತುವಿನಲ್ಲಿ ಗುಡ್ಡ ಕುಸಿದು ಕೃಷಿ ಹಾನಿ

ಪುತ್ತಿಲ : ಮೇ.30ರಂದು ಸುರಿದ ಧಾರಾಕಾರ ಮಳೆಗೆ ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಜ್ ಪುತ್ತಿಲರವರ ತೋಟಕ್ಕೆ ಭಾರೀ ಪ್ರಮಾಣದಲ್ಲಿ 3 ಕಡೆ ಗುಡ್ಡ ಕುಸಿದು ಬಿದ್ದು ಹಳ್ಳದ ಕಟ್ಟೆ ಒಡೆದು ಅಡಿಕೆ ತೋಟಕ್ಕೆ ಪ್ರವಾಹದ ರೀತಿಯಲ್ಲಿ ನೀರು ನುಗ್ಗಿ ಕೃಷಿಗೆ ಅಪಾರ ಹಾನಿಯಾಗಿದೆ.

ನೀರಿನೊಂದಿಗೆ ಅಂದಾಜು 50 ಲೋಡಿನಷ್ಟು ಮಣ್ಣು ತೋಟದಲ್ಲಿ ತುಂಬಿ ಕೆಸರುಮಯವಾಗಿ ತೋಟ ಸಂಪೂರ್ಣ ನಾಶವಾಗುವ ಪರಿಸ್ಥಿತಿ ಎದುರಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Exit mobile version