Site icon Suddi Belthangady

ಕರಾಯದಲ್ಲಿ ಗುಡ್ಡ ಕುಸಿದು ಕೃಷಿ ಹಾನಿ

ಕರಾಯ: ಮೇ.30ರಂದು ಸುರಿದು ಧಾರಾಕಾರ ಸುರಿದ ಮಳೆಗೆ ಗ್ರಾಮದ ಖಂಡಿಗ ನಿವಾಸಿ ದೊಡ್ಡಪ್ಪ ಗೌಡ, ಶ್ರೀಧರ ಗೌಡ, ಬೊಮ್ಮಣ್ಣ ಗೌಡರ ತೋಟಕ್ಕೆ ಸುಮಾರು 4,5 ಕಡೆ ಪ್ರವಾಹದ ರೀತಿಯಲ್ಲಿ ಗುಡ್ಡ ಕುಸಿದು ಬಿದ್ದು ಹರಿಯುವ ನದಿ ಬಂದ್ ಆಗಿ ಅಡಿಕೆ ತೋಟದಲ್ಲೇ ನೀರು ಹರಿದಾಡುತ್ತಿದ್ದು ಕೃಷಿ ಹಾನಿಯಾಗಿದೆ.

ನೀರು ಹೀಗೆ ತೋಟದಲ್ಲಿ ಹರಿದು ಹೋದದ್ದೇ ಆಗಿದ್ದಲ್ಲಿ ತೋಟವು ಸಂಪೂರ್ಣ ನಾಶವಾಗುತ್ತದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯೂ ಸೂಕ್ತ ಪರಿಹಾರ ನೀಡುಬೇಕೆಂದು ಆಗ್ರಹಿಸಿದ್ದಾರೆ.

Exit mobile version