Site icon Suddi Belthangady

ವೇಣೂರು: ಉಪನಯನದಲ್ಲಿ ಗಾನವೈಭವ

ವೇಣೂರು: ಖ್ಯಾತ ಮದ್ಲೇಗಾರರೂ,ಯಕ್ಷಗುರುಗಳೂ ಆದ ಕೊಂಕಣಾಜೆ ಚಂದ್ರಶೇಖರ ಭಟ್ ಮತ್ತು ಸರೋಜ ದಂಪತಿಗಳ ಪುತ್ರ ಸುಶೇಣ ಉಪಾಧ್ಯಾಯನ ಬಹ್ಮೋಪದೇಶ ಪ್ರಯುಕ್ತ ತೆಂಕುತಿಟ್ಟಿನ ಖ್ಯಾತ ಭಾಗವತರಿಂದ ಯಕ್ಷಗಾನ ಗಾನವೈಭವ ವೇಣೂರಿನ ಬಾಹುಬಲಿ ಸಭಾಭಾವನದಲ್ಲಿ ಮೇ.30ರಂದು ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳದ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಭಾಗವಹಿಸಿ ಉಪನೀತ ವಟುವನ್ನು ಹಾಗೂ ಮನೆಯವರನ್ನು ಹರಸಿದರು.

Exit mobile version