Site icon Suddi Belthangady

ಪದ್ಮುಂಜ ಅರಿವು ಕೇಂದ್ರ ವತಿಯಿಂದ ಬೇಸಿಗೆ ಶಿಬಿರ

ಪದ್ಮುಂಜ: ಕಣಿಯೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮಾಹಿತಿ ಅರಿವು ಕೇಂದ್ರ ವತಿಯಿಂದ ರಜೆಯಲ್ಲಿರುವ ಗ್ರಾಮೀಣ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಕಾರ್ಯಕ್ರಮ ಕಣಿಯೂರು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ರೇವತಿಯವರ ನೇತೃತ್ವದಲ್ಲಿ ಮೇ. 14 ರಿಂದ ಪ್ರಾರಂಭಗೊಂಡು 22 ರಂದು ಕೊನೆಗೊಂಡಿತು. ಗ್ರಾ. ಪಂ ಉಪಾಧ್ಯಕ್ಷೆ ಜಾನಕಿಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ರವರು ಮಾತನಾಡಿ ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ., ಸಿಬ್ಬಂದಿಗಳಾದ ಉಮೇಶ್, ಪ್ರದೀಪ್, ಲಕ್ಷ್ಮಿ, ಚಿರಂಜೀವಿ, ಎಂ.ಬಿ.ಕೆ ರತ್ನ ಉಪಸ್ಥಿತರಿದ್ದರು.

ವಿಧ್ಯಾರ್ಥಿಗಳಿಗೆ ಘಣ ತ್ಯಾಜ್ಯ ವಿಲೇವಾರಿ ಘಟಕ, ಆಹಾರೋದ್ಯಮ ಮಾರುತಿಪುರ ಅಕ್ಕಿ ತಯಾರಿಸುವ ಯಂತ್ರೋಪಕರಣಗಳನ್ನು ಸಂದರ್ಶಿಸಲಾಯಿತು. ವಿಧ್ಯಾರ್ಥಿಗಳು ವಿವಿದ ರೀತಿಯ ಆಟೋಟಗಳಲ್ಲಿ ಭಾಗವಹಿಸಿ ಸಂತೋಷದ ಸಿಹಿ ಹಂಚಿಕೊಂಡರು. ಮೇಲ್ವಿಚಾರಕಿ ರೇವತಿಯವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

Exit mobile version