Site icon Suddi Belthangady

ಧರ್ಮಸ್ಥಳ: ಶ್ರೀ ಧ. ಮಂ. ಆಂಗ್ಲಮಾಧ್ಯ‌ಮ ಶಾಲೆ‌‌ಯಲ್ಲಿ ಹೆತ್ತವರಿಗೆ ಮಾಹಿತಿ‌ ಕಾರ್ಯಾಗಾರ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಧರ್ಮಸ್ಥಳದ ಸಂಸ್ಥೆಯ ಹಾಗೂ ಶಾಲೆಯ ಕುರಿತು ಮಾಹಿತಿ‌ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಈ‌ ಕಾರ್ಯಾಕ್ರಮವನ್ನು ಜ್ಞಾನ ವಿಕಾಸ ಯೂಟ್ಯೂಬ್ ಚಾನಲ್ ಸಂಯೋಜಕಿ ಪೂಜಾ ಪಕಳ‌ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ‌‌ ಮಾತನಾಡಿದ ಅವರು ಶಿಕ್ಷಣದ‌ ಮಹತ್ವ ಆದರ‌ ಅವಶ್ಯಕತೆ, ಮಕ್ಕಳನ್ನು ಬೆಳೆಸಬೇಕಾದ ರೀತಿ ಹಾಗೂ ಧರ್ಮಸ್ಥಳ ಸಂಸ್ಥೆಗಳ‌ ಕುರಿತು ಮಾಹಿತಿಯನ್ನು ಅನೇಕ ಜೀವಂತ ಉದಾಹರಣೆಯ ಮುಖಾಂತರ ಮನಮುಟ್ಟುವಂತೆ ವಿವರಿಸಿದರು.

ಪ್ರಾಸ್ಥಾವಿಕವಾಗಿ ಮಾತನಾಡಿದ‌ ಶಾಲೆಯ ಮುಖ್ಯೋಪಾಧ್ಯಾಯಿನಿ‌‌ ಪರಿಮಳ‌ ಎಂ.ವಿ ಮಾತನಾಡಿ ಶಾಲೆಯ ಆಗು ಹೋಗುಗಳ ಕುರಿತು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿನಿ‌ ಕುಮಾರಿ‌ ಕ್ಷಮಾ ನಿರೂಪಿಸಿದ‌ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಸ್ವಾಗತಿಸಿ, ಪೂರ್ವಿ ಭಟ್ ಧನ್ಯವಾದವಿತ್ತರು. ಶಾಲಾ‌ ಶಿಕ್ಷಕ ವೃಂದ‌ ಹಾಗೂ ಹೆತ್ತವರು ಉಪಸ್ಥಿತರಿದ್ದರು.

Exit mobile version