Site icon Suddi Belthangady

ಉಜಿರೆ: ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ‘ದ್ವಿತೀಯ ಪಿಯುಸಿ ವಿದ್ಯಾರ್ಥಿ ಹೆತ್ತವರಿಗೆ ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ’

ಉಜಿರೆ: ವಿದ್ಯಾರ್ಥಿಗಳ ಯೋಚನೆ ಕೆಸರಿನಲ್ಲಿ ಹೂತ ಕೋಲಿನಂತೆ ಯಾವತ್ತೂ ಇರಬಾರದು, ದೃಢ ಚಿತ್ತದಿಂದ ಕೂಡಿದ,ಸಮಯದೊಂದಿಗೆ ಪೂರೈಸಲಾಗುವ, ತಲುಪಲು ಸುಲಭವಾಗಿರುವ, ಸಕಾರಾತ್ಮಕ, ಆಶಾವಾದದ ಗುರಿಗಳು ನಿಮಗಿರಲಿ. ಕಲಿಕೆ ಕೇವಲ ಅಂಕಗಳಿಗೆ ಸೀಮಿತವಲ್ಲ ಮೌಲ್ಯಯುತವಾಗಿ ಸಂಸ್ಕಾರದಿಂದ ಕೂಡಿದ್ದಾಗ ಮಾತ್ರವೇ ಅದು ಸಾರ್ಥಕ. ಶಿಕ್ಷಕರ ಮಾರ್ಗದರ್ಶನದ ಜೊತೆ ಜೊತೆಗೆ ವಿದ್ಯಾರ್ಥಿಯ ಪಾಲ್ಗೊಳ್ಳುವಿಕೆ ಇದ್ದಾಗಲೇ ಕಲಿಕೆ ಉತ್ತಮಿಕೆ ಸಾಧಿಸಲು ಸಾಧ್ಯವೆಂದು ಎಸ್. ಡಿ. ಎಂ.ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕರು ಆಗಿರುವ ಶ್ರೀಯುತ ಕಾಕತ್ಕರ್ ಹೇಳಿದರು, 2025ರ ದ್ವಿತೀಯ ಪಿಯುಸಿ ಶೈಕ್ಷಣಿಕ ಪ್ರಶಿಕ್ಷಣ ಶಿಬಿರವನ್ನು ದೀಪ ಬೆಳಗಿ ಉದ್ಘಾಟನೆ ಮಾಡಿ ಶುಭ ಕೋರಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ರವರು ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಹೆತ್ತವರ ಜವಾಬ್ದಾರಿ ಕುರಿತು ವಿವರವಾಗಿ ತಿಳಿಸಿದರು.ಮುಂದಿನ ದಿನಗಳಲ್ಲೂ ಉತ್ತಮ ಫಲಿತಾಂಶಕ್ಕೆ ಪರಿಶ್ರಮದಿಂದ ಕೂಡಿದ ಓದುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಗಣಕಶಾಸ್ತ್ರದ ಉಪನ್ಯಾಸಕರಾದ ಶ್ರೀಯುತ ಪವಿತ್ರ ಕುಮಾರ್ ಸ್ವಾಗತಿಸಿದರು.

ಉಪ ಪ್ರಾಂಶುಪಾಲರಾದ ಶ್ರೀಯುತ ಮನೀಶ್ ಕುಮಾರ್ ರವರು ವಂದಿಸಿದರು. ಭೌತಶಾಸ್ತ್ರದ ಉಪನ್ಯಾಸಕರಾದ ಶ್ರೀಯುತ ವಿಕ್ರಂ ಪಿ. ನಿರೂಪಿಸಿದರು.

Exit mobile version