Site icon Suddi Belthangady

ಬೆಳ್ತಂಗಡಿಯಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ

ಬೆಳ್ತಂಗಡಿ: ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ(Bamboo society of india) ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಬೆಳ್ತಂಗಡಿ ಮತ್ತು ಗುರುವಾಯನಕೆರೆ, ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಘಟಕ, ಉಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ತರಬೇತಿ ನಡೆಸಲಾಯಿತು.

ಬೆಳ್ತಂಗಡಿ ಹಾಗೂ ಗುರುವಾನಕೆರೆ ತಾಲೂಕಿನ ಆಯ್ದ ರೈತರಿಗೆ ಬಿದಿರು ನಾಟಿಯ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಕೃಷಿ ವಿಭಾಗದ ಕೇಂದ್ರ ಕಚೇರಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮೀನೇಜಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಕಾರ್ಯಕ್ರಮದ ಪ್ರಯೋಜನ, ಬೆಂಬೋ ಸೊಸೈಟಿಯಿಂದ ಸಿಗುತ್ತಿರುವ ಸಹಕಾರ ಹಾಗೂ ಬಿದಿರು ಕೃಷಿ ಅನುಷ್ಠಾನಗೊಳಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ಬ್ಯಾಂಬೂ ಸೊಸೈಟಿ ಅಪ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಎನ್. ಮೂರ್ತಿ ಬಿದಿರು ನಾಟಿ,ಬೇಕಾದ ದಾಖಲಾತಿ,ಪ್ರೋತ್ಸಾಹ ಧನ,ಮುಂದಿನ ದಿನದಲ್ಲಿ ಬಿದಿರಿಗೆ ಅತಿ ಬೇಡಿಕೆ ಇದ್ದು ಬಿದಿರು ಕೃಷಿಯ ಪೂರ್ಣ ಮಾಹಿತಿ ಹಾಗು ಇತ್ಯಾದಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಬಿದಿರು ಕೃಷಿ ಅನುಷ್ಠಾನಿಸುವ ಬಗ್ಗೆ ಮಾಡಿದರು. ಬೆಳ್ತಂಗಡಿ ಅರಣ್ಯಾಧಿಕಾರಿ ತ್ಯಾಗರಾಜ್ ಅರಣ್ಯ ಇಲಾಖೆಯಿಂದಲೂ ಬಿದಿರು ಕೃಷಿಗೆ ಉತ್ತಮ ಪ್ರೋತ್ಸಾಹ ಇದ್ದು ಸದಸ್ಯರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಯಶೋದರ, ಗುರುವಾನಕೆರೆ ಯೋಜನಾಧಿಕಾರಿ ಅಶೋಕ್, ಕೇಂದ್ರ ಕಚೇರಿ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಬಾಲಕೃಷ್ಣ, ಮಾರುತಿ, ಬಿದಿರು ಕೃಷಿ ಅನುಷ್ಠಾನದ ಮೇಲ್ವಿಚಾರಕ ಕುಮಾರ್, ಈಗಾಗಲೇ ಬಿದಿರು ಕೃಷಿ ಮಾಡಿರುವ ಪರಿಣಿತ ರೈತರು, ತಾಲೂಕಿನ ಆಯ್ದ ರೈತರು ಉಪಸ್ಥಿತಿ ಇದ್ದು ಮಾಹಿತಿಯನ್ನು ಸಂವಾದದ ಮೂಲಕ ಮಾಹಿತಿ ಪಡೆದುಕೊಂಡರು.

Exit mobile version