Site icon Suddi Belthangady

ಧರ್ಮಸ್ಥಳ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರಡಿಪಾತ್ ಕಾರ್ಯಾಗಾರ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧರ್ಮಸ್ಥಳದಲ್ಲಿ ಒಂದು ದಿನದ ಕರಡಿಪಾತ್ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವನ್ನು ಧರ್ಮಸ್ಥಳ ದೇವಾಲಯದ ಮಣೆಗಾರ ವಸಂತ ಭಟ್ ದೀಪ ಪ್ರಜ್ವಲಿಸಿ ಚಾಲನೆಯನ್ನು ನೀಡಿ ಶಾಲೆಯ ಎಲ್ಲಾ‌ ಮುಂದಿನ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ. ವಿ. ಕ ಪ್ರಸ್ತಾವಿಕ ನುಡಿಗಳನ್ನು ಆಡಿದರು. ತರಬೇತುದಾರರಾಗಿ ಅನೂಜ್ ದೇವ್ ಲೆಸ್ಲೆ ಹಾಗೂ ನಿಖಿಲ್ ಅವರು ಕರಡಿಪಾತ್ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಆಗಮಿಸಿದ್ದರು. ಶಿಕ್ಷಕರಿಗೆ ಉತ್ತಮ ಮಾಹಿತಿಯನ್ನು ನೀಡಿದರು. ಶಾಲಾ‌ ಸಹ ಶಿಕ್ಷಕಿ ಪದ್ಮಶ್ರೀ ಪ್ರಾರ್ಥನೆಯನ್ನು ನಡೆಸಿ, ರಮಾ ವಂದಿಸಿ, ಆಶಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Exit mobile version