Site icon Suddi Belthangady

ಬೌದ್ಧ ಮಹಾಸಭಾ ಮಾಲಾಡಿ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

ಮಾಲಾಡಿ: ಬೌದ್ಧ ಮಹಾಸಭಾ ವತಿಯಿಂದ ಮೇ. 12ರಂದು 9 ಗಂಟೆಗೆ ಅಂಬೇಡ್ಕರ್ ಭವನದಲ್ಲಿ 2569ನೇ ಪವಿತ್ರ ಬುದ್ಧ ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸುಕೇಶ್ ಕೆ. ಇವರು ಸ್ವಾಗತಿಸಿದರು. ಬಳಿಕ ಬೌದ್ಧ ಮಹಾಸಭಾದ ಅಧ್ಯಕ್ಷ ಸುನೀಲ್ ಮಾಲಾಡಿ ಹಾಗೂ ಅದೇ ದಿನ 25ನೇ ವರ್ಷದ ಮದುವೆ ದಿನದ ಸಂಭ್ರಮದಲ್ಲಿದ್ದ ಗುಲಾಬಿ ಆನಂದ ದಂಪತಿಗಳು ಭಗವಾನ್ ಬುದ್ಧನ ಮೂರ್ತಿಯ ಎದುರು ಕ್ಯಾಂಡಲ್ ಉರಿಸಿ ಚಾಲನೆ ನೀಡಿದರು.

ಹಿರಿಯರಾದ ಬಿ.ಕೆ.ಚೆನ್ನಪ್ಪ ಹಾಗೂ ಕೇಶವ ಇವರುಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.‌ ಕಿರಿಯರಾದ ಪ್ರಣಮ್, ಶರಣ್, ಸುಜ್ನಾತ್ ಹಾಗೂ ಶ್ರವಣ್ ದೀಪ ಬೆಳಗಿಸಿದರು.‌ ಬಳಿಕ ಹಿರಿಯ ಉಪಾನ್ಯಾಸಕ ಬಾಬಿ ಮಡಂತ್ಯಾರ್ ಬುದ್ಧವಂದನೆ, ಧರ್ಮವಂದನೆ ಹಾಗೂ ಸಂಘವಂದನೆಯನ್ನು ನಡೆಸಿಕೊಟ್ಟರು. ಲೋಕಶಾಂತಿಗಾಗಿ ಧ್ಯಾನದ ಮೂಲಕ ಸರ್ವರ ಹಿತ ಬಯಸಲಾಯಿತು. ಸುಮಾರು 75 ಜನ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬಂದಂತಹ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 10.30ಕ್ಕೆ ಸರಿಯಾಗಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.‌

Exit mobile version