Site icon Suddi Belthangady

ವೇಣೂರು ಯುವವಾಹಿನಿ ಘಟಕದಿಂದ ವೈದ್ಯಕೀಯ ನೆರವು

ವೇಣೂರು: ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಅಂಡಿಂಜೆ ಗ್ರಾಮದ ಕೋಡಿ ದರ್ಖಾಸು ಮನೆಯ ಸುಜಿತ್ ಪೂಜಾರಿಯವರು ಕಾಶಿಪಟ್ಣದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ತಲೆಗೆ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಮಂಗಳೂರಿನ ಕೆ. ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಘಟಕದ ವತಿಯಿಂದ ಸೇವಾನಿಧಿ ರೂ.ಹತ್ತು ಸಾವಿರ ಅಧ್ಯಕ್ಷ ಶುಭಕರ್ ಪೂಜಾರಿ ನೀಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕ ಅರುಣ್ ಕೋಟ್ಯಾನ್, ನಾಮ ನಿದೇಶನ ಸದಸ್ಯ ಸುರೇಶ್ ಅಂಡಿಂಜೆ, ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಉಪಸ್ಥಿತರಿದ್ದರು.

Exit mobile version