Site icon Suddi Belthangady

ಹೊಸಂಗಡಿ ಪಂಚಾಯತ್ ಉಪಚುನಾವಣೆ, ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಆನಂದ ಕೊಡಂಗೇರಿ ನಾಮಪತ್ರ ಸಲ್ಲಿಕೆ

ವೇಣೂರು: ಹೊಸಂಗಡಿ ಪಂಚಾಯತ್ 3ನೇವಾರ್ಡ್ ಸದಸ್ಯ ದಿ. ಹರಿಪ್ರಸಾದ್ ರವರ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಮೇ.14ರಂದು ಸದ್ರಿ ವಾರ್ಡ್ ನಿವಾಸಿ, ಪೆರಿಂಜೆ ಸರಕಾರಿ ಶಾಲಾ ಮಾಜಿ ಮೇಲುಸ್ತುವಾರಿ ಅಧ್ಯಕ್ಷ ಹಾಗು ಪೆರಿಂಜೆ ಹಾಲು ಉತ್ಪಾದಕ ಸಂಘದ ನಿರ್ದೇಶಕ ಆನಂದ ಕೊಡಂಗೇರಿ, ಚುನಾವಣಾಧಿಕಾರಿ ಗಣೇಶ್ ರಾಮಚಂದ್ರ ಭಟ್ ರವರಿಗೆ ನಾಮಪತ್ರ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಹಕರಿಸಿದರು.

ಕೆಪಿಸಿಸಿ ಪ್ರ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸತೀಶ್ ಕಾಶಿಪಟ್ನ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಹೊಸಂಗಡಿ ಪಂಚಾಯತ್ ವ್ಯಾಪ್ತಿ ಪಕ್ಷದ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಕೆ., ಅಕ್ಕು, ಪೆರಿಂಜೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎನ್. ಸೀತಾರಾಮ ರೈ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ, ಪೆರಿಂಜೆ, ಪ್ರಮುಖರಾದ ಹಿರಿಯರಾದ ಶಿವಪ್ಪ ಪೂಜಾರಿ ಕೊಡಂಗೇರಿ, ಪದ್ಮರಾಜ ಪೇರಿ, ಧರ್ಣಪ್ಪ ಪಡ್ಯಾರಬೆಟ್ಟ, ನಾಗೇಶ್ ಕೋಟಿಯನ್ ಹೊಸಂಗಡಿ, ಚಂದ್ರಕಾಂತ್, ಅರವಿಂದ ಶೆಟ್ಟಿ ಖಂಡಿಗ, ಸೂರಜ್ ಪೇರಿ, ಪಂಚಯಾತ್ ಸದಸ್ಯೆ ಜೆ. ಶಾಂತ, ಮಾಜಿ ಸದಸ್ಯೆ ಸುಮತಿ, ವಿಜಯ ಶೆಟ್ಟಿ, ಪ್ರಶಾಂತ್ ನಾಯಕ್, ವಾಸುದೇವ ನಾಯ್ಕ್, ಕೆ.ಪಿ. ಬಶೀರ್ ಪಡ್ಡಂದಡ್ಕ, ಶೀನಪ್ಪ ಕೊಡಂಗೇರಿ, ರಾಗಿಣಿ ಪೇರಿ, ವಿಜಯ ದೆರಾರ್, ಗೋಪಾಲ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version