ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಲ್ಫೋನ್ಸ ಚರ್ಚ್ ನಲ್ಲಿ ಅಗಲಿದ ಜಾಗತಿಕ, ಧಾರ್ಮಿಕ ನಾಯಕ ಜಗತ್ತಿನ ಬಡ ದೇಶಗಳ ಧ್ವನಿ, ಶ್ರೇಷ್ಠ ಅಹಿಂಸಾವಾದಿ, ತುಳಿತಕ್ಕೋಳಗಾದವರಿಗಾಗಿ, ಬಡವರಿಗಾಗಿ ಹೃದಯ ಬಾಗಿಲುಗಳನ್ನು ತೆರೆದು, ಸರಳ ಸಜ್ಜಿನಿಕೆಯ ಬದುಕಿಗೆ ಇನ್ನೊಂದು ಹೆಸರಾಗಿದ್ದ ಪೋಪ್ ಫ್ರಾನ್ಸಿಸ್ ಅವರಿಗೆ ಎ.26ರಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪೂಜಾ ವಿಧಿಗಳಿಗೆ ಪುಣ್ಯ ಕ್ಷೇತ್ರದ ಫಾ. ಶಾಜಿ ಮಾತ್ಯು ನೇತೃತ್ವ ವಹಿಸಿದ್ದರು.
ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ರವರಿಗೆ ಶ್ರದ್ಧಾಂಜಲಿ
