ಮುದ್ದಿಗೆ: ಅಖಿಲ ಕರ್ನಾಟಕ ರಾಣಿಯಾರ್ ಸಮಾಜ ಸೇವಾ ಸಂಘ ವಲಯ ಶಾಖೆ ತುಂಬೆತಡ್ಕ ಇದರ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಏ.10ರಂದು ಹಮ್ಮಿಕೊಂಡಿದ್ದು, ಈ ಪ್ರಯುಕ್ತ “ರಾಣಿಯಾರ್ “ಜಾತಿ ಭಾಂದವರು ಮುದ್ದಿಗೆಯಿಂದ ಕಾಂತ್ರೆಲ್ ಹಾಗೂ ಮುದ್ದಿಗೆಯಿಂದ ಒಳಂಬಳದವರೆಗೆ ರಸ್ತೆ ಪಕ್ಕ ಪ್ಲಾಸ್ಟಿಕ್, ಕಸ, ತ್ಯಾಜ್ಯ ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮಕ್ಕೆ ರಾಣಿಯಾರ್ ವಲಯ ಶಾಖೆ ಅಧ್ಯಕ್ಷರು ಮಹಾಬಲ ಕೆ, ಕಾರ್ಯದರ್ಶಿ ಉಮೇಶ, ಉಪಾಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಪ್ರೇಮಚಂದ್ರ ಎಸ್, ಕೋಶಾಧಿಕಾರಿ ಶ್ರೀಧರ ಕೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಟಿ. ಕೆ, ಉಮೇಶ ಹಚ್, ನಾಗೇಶ, ರವಿ ಎಸ್. , ರವೀಂದ್ರ ಕೆ., ಶೈಲಾ, ಪದ್ಮಾವತಿ ಹಾಗೂ ರಾಣಿಯಾರ್ ಜಾತಿ ಭಾಂದವರು ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ.