ಬೆಳ್ತಂಗಡಿ: ಏ. 28ರಂದು ಬೆಳ್ತಂಗಡಿಯಲ್ಲಿ ಜರಗಲಿರುವ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ-2025. ದಲಿತ ಸಾಂಸ್ಕ್ರತಿಕ ವೈವಿಧ್ಯ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ವಿತರಣೆ ಕಾರ್ಯಕ್ರಮವು ಸಮಿತಿ ಗೌರವಾಧ್ಯಕ್ಷ ಚೆನ್ನಕೇಶವರವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭ ಉಪಾಧ್ಯಕ್ಷರಾದ ಪಿ.ಕೆ. ರಾಜು ಪಡಂಗಡಿ, ವೆಂಕಣ್ಣ ಕೊಯ್ಯೂರು, ಸತೀಶ್ ಸುಲ್ಕೇರಿಮೊಗ್ರು, ಪ್ರಧಾನ ಕಾರ್ಯದರ್ಶಿ ಅಚುಶ್ರೀ ಬಾಂಗೇರು, ಗೌರವ ಸಲಹೆಗಾರರಾದ ಪಿ.ಕೆ.ಚೀಂಕ್ರ,
ಪುಟ್ಟಣ್ಣ ಪಟ್ರಮೆ, ಸುಂದರ ನಾಲ್ಕೂರು, ಕೂಸ ಅಳದಂಗಡಿ, ರಾಜೇಶ್ ಬಿ. ಕೊಕ್ಕಡ ಮುಂತಾದವರು ಉಪಸ್ಥಿತರಿದ್ದರು.