ಉಜಿರೆ: ಮುಂಡಾಜೆಯ ಗುಣವತಿ ಶೆಟ್ಟಿಯವರ ಗೃಹ ನಿರ್ಮಾಣಕ್ಕೆ ಉಜಿರೆ ವಲುದ ಬಂಟರ ಯಾನೆ ನಾಡವರ ಸಂಘ ಸಮಿತಿಯಿಂದ 21000 ರೂ ವನ್ನು ದೇಣಿಗೆ ರೂಪದಲ್ಲಿ ನೀಡಲಾಯಿತು. ಉಜಿರೆ ವಲಯದ ಬಂಟ ಬಾಂಧವರಿಂದ ಸಹಾಯ ಧನ ರೂಪದಲ್ಲಿ ಈ ಮೊತ್ತ ಸಂಗ್ರಹಿಸಲಾಗಿದ್ದು, ಮಾ.9ರಂದು ನಡೆದ ಸಭೆಯಲ್ಲಿ ಗುಣವತಿ ಶೆಟ್ಟಿಯವರಿಗೆ ನೀಡಲಾಯಿತು.
ಉಜಿರೆ ವಲಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ, ಕಾರ್ಯದರ್ಶಿ ಸುದೇಶ್ ಶೆಟ್ಟಿ ಕುಂಠಿನಿ, ಉಪಾಧ್ಯಕ್ಷೆ ಸುಜಿಯ ಡಿ. ಶೆಟ್ಟಿ, ಕೋಶಾಧಿಕಾರಿ ಅಜಿತ್ ಕುಮಾರ್ ಕುಂಜಿರ್ವ, ಗ್ರಾಮ ಸಮಿತಿ ಅಧ್ಯಕ್ಷ ಜಗನ್ನಾಥ ರೈ, ಮುಂಡಾಜೆ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಗರಿ, ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ವೆಂಕಟರಮಣ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ಶೋಬಾ ವಿ. ಶೆಟ್ಟಿ, ಪುಷ್ಪ ಆರ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.