ಬೆಳ್ತಂಗಡಿ: ಲಾಯಿಲ ಗ್ರಾಮದ ಬಬಿತ್ ರಾಜ್ ಮತ್ತು ಶ್ರಾವ್ಯ ಇವರ ಮಗನಾದ ಶ್ರೀಯಾಂಕ್ ಇವರ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ವೇಣೂರು “ಶ್ರೀ ಗುರು ಚೈತನ್ಯ’ ಸೇವಾಶ್ರಮದಲ್ಲಿ ಆಶ್ರಮ ವಾಸಿಗಳಿಗೆ 1 ತಿಂಗಳಿಗೆ ಬೇಕಾಗುವ ದಿನಸಿ ಸಾಮಗ್ರಿ ನೀಡಿ ವೃದ್ದರಿಗೆ ಹಣ್ಣು ಹಂಪಲು ನೀಡುವುದರೊಂದಿಗೆ ಆಚರಿಸಿದರು.
ಶ್ರೀ ಗುರು ಚೈತನ್ಯ ಆಶ್ರಮದ ಹೊನ್ನಯ್ಯ ಕಾಟಿಪಳ್ಳ , ಶ್ರೀಯಾಂಕ್ ಇವರ ಅಜ್ಜಿಯಾದ ಭಾರತಿ ಶೆಟ್ಟಿ, ಲೋಕೇಶ್ ಕುತ್ಲೂರು ಸುಶಾಂತ್, ಗಣೇಶ್ ದೇವಾಡಿಗ ಇವರುಗಳು ಉಪಸ್ಥಿತರಿದ್ದರು.