Site icon Suddi Belthangady

ವೇಣೂರು ಸಹಕಾರ ಸಂಘದ ಅಧ್ಯಕ್ಷರಾಗಿ ಸುಂದರ ಹೆಗ್ಡೆ 3ನೇ ಬಾರಿಗೆ ಆಯ್ಕೆ, ಉಪಾಧ್ಯಕ್ಷರಾಗಿ ರತ್ನಾಕರ ಬಿ.

ವೇಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಹಾಲಿ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯ, ಉದ್ಯಮಿ, ಸಮಾಜಸೇವಕ, ಸಂಘಟಕ ಸುಂದರ ಹೆಗ್ಡೆ ಬಿ. ಇ. 3ನೇ ಬಾರಿಗೆ ಹಾಗೂ ಉಪಾಧ್ಯಕ್ಷರಾಗಿ ರತ್ನಾಕರ ಪೂಜಾರಿ ಬರ್ಕಜೆ ಅವಿರೋಧವಾಗಿ ಆಯ್ಕೆಯಾದರು.

ಫೆ. 19ರಂದು ನಡೆದ ನಿರ್ದೇಶಕರ ಸಭೆಯಲ್ಲಿ ಆಯ್ಕೆಯಾದರು. ನಿರ್ದೇಶಕರುಗಳಾದ ರಾಮದಾಸ ನಾಯಕ್, ಸಂದೀಪ್ ಹೆಗ್ಡೆ, ಸಂತೋಷ್ ಜೈನ್, ಪ್ರವೀಣ್ ಪರಿಯೊಟ್ಟು,ಪ್ರಶಾಂತ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರಾಜು ನಾಯ್ಕ, ನಾಗಪ್ಪ, ಆಶಾ ಸುಂದರ, ರೋಹಿನಿ ಪ್ರಕಾಶ್‌ ಉಪಸ್ಥಿತರಿದ್ದರು.

8 ಗ್ರಾಮ ವ್ಯಾಪ್ತಿಯ ಸೊಸೈಟಿ ವೇಣೂರು, ಮೂಡುಕೋಡಿ, ಕರಿಮಣೇಲು, ನಿಟ್ಟಡೆ, ಕುಕ್ಕೇಡಿ, ಅಂಡಿಂಜೆ, ಬಜಿರೆ ಹಾಗೂ ಗುಂಡೂರಿ ಗ್ರಾಮಗಳ ವ್ಯಾಪ್ತಿಗೆ ಒಳಗೊಂಡಿರುವ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ರಿಂದ 2029-30ರವರೆಗಿನ ಅವಧಿಗೆ ಜ.12 ರಂದು ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ಸದಸ್ಯರು ಆಯ್ಕೆಯಾಗಿದ್ದರು .

ಚುನಾವಣಾಧಿಕಾರಿ ಪ್ರತಿಮಾ ಚುನಾವಣಾ ಪ್ರಕ್ರಿಯೆ ನಡೆಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪೂಜಾರಿ ಹಾಗೂ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Exit mobile version