Site icon Suddi Belthangady

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷ, ಸದಸ್ಯರ ನೇಮಕ

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದಿನ 3 ವರ್ಷದ ಅವಧಿಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯನ್ನು ಸರ್ಕಾರ ರಚಿಸಿದೆ.

ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಕೆ ದಾಸಪ್ಪ ಗೌಡ, ಸದಸ್ಯರಾಗಿ ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ ಗೌಡ, ಸುರೇಶ್ ಬಿ, ಸತೀಶ್ ಕಾಮತ್, ಉಮೇಶ್ವರಿ, ಹರಿಣಿ, ಪೂವಪ್ಪ ಎಂ. ಕೆ. ಮತ್ತು ಅರ್ಚಕರಾಗಿ ಶ್ರೀಧರ್ ಭಟ್ ನೇಮಕವಾಗಿದ್ದಾರೆ.

Exit mobile version