Site icon Suddi Belthangady

ಉಜಿರೆ: ಉಜಿರೆ ಅಮೃತ್ ಸಿಲ್ಕ್ಸ್ ನಲ್ಲಿ ವಿಜಯೋತ್ಸವ ಕೂಪನ್ ಬಿಡುಗಡೆ

ಉಜಿರೆ: ಕಳೆದ 19 ವರ್ಷಗಳಿಂದ ಉಜಿರೆ ಅಮೃತ್ ಸಿಲ್ಕ್ಸ್ ಮತ್ತು ರೆಡಿಮೆಡ್ ಗ್ರಾಹಕರ ಮನಗೆದ್ದಿದೆ ಎಂದರೆ ಇಲ್ಕಿ ಗುಣಮಟ್ಟದ ಬಟ್ಟೆಗಳು, ಉತ್ತಮ ಸಂಗ್ರಹ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಅಗತ್ಯ ಬಟ್ಟೆಗಳನ್ಬು ತರಿಸಿಕೊಡುವ ಮೂಲಕ ಬೆಂಗಳೂರಿನ ಉತ್ಪನ್ನಗಳು ಇಲ್ಲಿ ಸಿಗುತ್ತಿದೆ. ಇದೀಗ ಗ್ರಾಹಕರಿಗೆ ಅನುಕೂಲವಾಗಲು ಸಾವಿರಾರು ಬಂಪರ್ ಬಹುಮಾನಗಳ ವಿಜಯವಾಣಿ ದಸರಾ, ದೀಪಾವಳಿ ವಿಜಯೋತ್ಸವ ಆಚರಿಸುತ್ತಿದ್ದು ಗ್ರಾಹಕರಿಗೆ ಅದೃಷ್ಟ ಒಲಿದು ಬರಲಿ ಎಂದು ಸೋನಿಯಾ ಯಶೋವರ್ಮ ಹೇಳಿದರು.

ಅವರು ಅ.22ರಂದು ಉಜಿರೆ ಅಮೃತ್ ಸಿಲ್ಕ್ಸ್ ಮತ್ತು ರೆಡಿಮೆಡ್ ನಲ್ಲಿ ವಿಜಯವಾಣಿ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಪ್ರಶಾಂತ್ ಜೈನ್ ದಂಪತಿಯ ಕಠಿನ ಶ್ರಮದಿಂದ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದಾರೆ. ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ, ಗುಣಮಟ್ಟದ ಉತ್ಪನ್ನಗಳಿಂದ ಮನೆಮಾತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ದೀಪಾಲಿ ಡೋಂಗ್ರೆ, ನೀತಾ ಎಂಬ್ರೋಸ್, ಗಾಯತ್ರಿ ಶ್ರೀಧರ್, ಉದ್ಯಮಿಗಳಾದ ಪದ್ಮನಾಭ ಶೆಟ್ಟಿಗಾರ್, ನವೀನ್ ಕುಮಾರ್, ಬಳಂಜ ಶಿಕ್ಷಣ ಟ್ರಸ್ಟ್ ನ ಟ್ರಷ್ಟಿಗಳಾದ ರತ್ನರಾಜ್ ಜೈನ್, ವಿನು ಬಳಂಜ, ಪ್ರಮೋದ್ ಜೈನ್, ಹಿರಿಯರಾದ ಅಮೃತಾವತಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮಾಲಕ ಪ್ರಶಾಂತ್ ಜೈನ್, ಸ್ಮಿತಾ ಪ್ರಶಾಂತ್ ಜೈನ್ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ನಿವೃತ್ತ ಶಿಕ್ಷಕ ಸೋಮಶೇಖರ್ ಶೆಟ್ಟಿ ನಿರೂಪಿಸಿದರು.

Exit mobile version