Site icon Suddi Belthangady

ಅ. 25: ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ – ಬೃಹತ್ ರಕ್ತದಾನ ಶಿಬಿರ

ನಿಡ್ಲೆ: ಬರೆಂಗಾಯ ಶಾಲಾ ಅಮೃತ ಮಹೋತ್ಸವ ಸಮಿತಿ 2024-25, ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಇವುಗಳ ಪ್ರಾಯೋಜಕತ್ವದಲ್ಲಿ ಉಜಿರೆ ಬೆನಕ ಹೆಲ್ತ್ ಸೆಂಟರ್, ಉಜಿರೆ ಬೆನಕ ಚಾರಿಟೇಬಲ್ ಟ್ರಸ್ಟ್, ಕೆ. ಎಂ. ಸಿ. ಆಸ್ಪತ್ರೆ, ಮಂಗಳೂರು ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಇವುಗಳ ಸಹಭಾಗಿತ್ವದೊಂದಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವು ಅ.25ರಂದು ಬೆಳಿಗ್ಗೆ 10ರಿಂದ 1.30ರವರೆಗೆ ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ (ಪ್ರಖ್ಯಾತ ಹೃದ್ರೋಗ ತಜ್ಞರು, ಕೆ.ಎಂ.ಸಿ. ಮಂಗಳೂರು), ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞ ಡಾ.ಆದಿತ್ಯ ರಾವ್(ಫಿಸಿಶಿಯನ್), ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಅಂಕಿತ ಜಿ. ಭಟ್, ಎಲುಬು-ಕೀಲು ತಜ್ಞ ಡಾ.ರೋಹಿತ್ ಜಿ. ಭಟ್, ಮಕ್ಕಳ ತಜ್ಞ ಡಾ.ಶಂತನು ಪ್ರಭು ಭಾಗವಹಿಸಲಿದ್ದಾರೆ.

Exit mobile version