Site icon Suddi Belthangady

ಗುರುವಾಯನಕೆ: ಎಕ್ಸೆಲ್ ಕಾಲೇಜು ಆದರ್ಶ ವಿದ್ಯಾಲಯ ಡಾ. ಸುಬ್ರಹ್ಮಣ್ಯ ಭಟ್

ಗುರುವಾಯನಕೆ: ಅತ್ಯುತ್ತಮ ಫಲಿತಾಂಶ, ಶಿಸ್ತು ಬದ್ಧ ಕಲಿಕೆ, ಆಹ್ಲಾದಕರ ವಾತಾವರಣ ಎಕ್ಸೆಲ್ ಪದವಿ ಪೂರ್ವ ಕಾಲೇಜನ್ನು ಒಂದು ಆದರ್ಶ ವಿದ್ಯಾಲಯವನ್ನಾಗಿ ರೂಪಿಸಿದೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.

ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ತನ್ನ ವಿದ್ಯಾರ್ಥಿಯಾಗಿದ್ದುದನ್ನು ಸ್ಮರಿಸಿದ ಅವರು, ಈ ಬೃಹತ್ ವಿದ್ಯಾಲಯದ ಬಗೆಗೆ ತನಗೆ ವಿಶೇಷ ಅಭಿಮಾನವಿದೆ ಎಂದರು.

ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಇತ್ತೀಚಿಗೆ ಭೇಟಿ ನೀಡಿದ ಅವರು, ಕಾಲೇಜು ವತಿಯಿಂದ ಮಾಡಲಾದ ಗೌರವಾರ್ಪಣೆಯನ್ನು ಸ್ವೀಕರಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್, ಆಡಳಿತ ಮಂಡಳಿಯ ಸಹನಾ ಜೈನ್, ಶೈಕ್ಷಣಿಕ ಸಂಯೋಜಕರಾದ ನಿಶಾ ಪೂಜಾರಿ ಉಪಸ್ಥಿತರಿದ್ದರು.

Exit mobile version