Site icon Suddi Belthangady

ಗುರುವಾಯನಕೆರೆ: ದಿ. ನಾರಾಯಣ ಆಚಾರ್ಯ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

ಗುರುವಾಯನಕೆರೆ: ಹಿರಿಯ ಕಾರ್ಯಕರ್ತ ದಿವಂಗತ ಗುರುವಾಯನಕೆರೆ ಪಾಂಡೇಶ್ವರ ನಾರಾಯಣ ಆಚಾರ್ಯ ಮನೆಗೆ ಅ.19ರಂದು ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ, ಮನೆಯವರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಶ್ರೀನಿವಾಸ್ ರಾವ್, ಎಂ.ಎಲ್.ಸಿ. ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಹಾಗೂ ಪ್ರಶಾಂತ್ ಪಾರೆಂಕಿ, ಜಿಲ್ಲಾ ಪ್ರಮುಖರಾದ ಸೀತಾರಾಮ್ ಬೆಳಾಲು, ವಸಂತಿ ಮಚ್ಚಿನ, ಉಮೇಶ್ ಕುಲಾಲ್ ಹಾಗೂ ಪಕ್ಷದ ಪ್ರಮುಖರಾದ ಕೊರಗಪ್ಪ ಗೌಡ, ತಾಲೂಕು ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ್ ಆಚಾರ್ಯ, ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಕುವೆಟ್ಟು, ಗ್ರಾಮದ ಪಕ್ಷದ ಪ್ರಮುಖರಾದ ಚಂದ್ರಹಾಸ್ ದಾಸ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಕೆ. ಹಾಗೂ ಕಾರ್ಯಕರ್ತರು ದಿವಂಗತ ನಾರಾಯಣ ಆಚಾರ್ಯರ ಮನೆಗೆ ಹೋಗಿ ಅವರ ಅಮ್ಮ, ಪತ್ನಿ ಶಾರದಾ, ಮಕ್ಕಳಾದ ಸಹನಾ, ವಿಕ್ರಮ್, ರಮ್ಯ ಅವರಿಗೆ ಸಾಂತ್ವಾನ ಹೇಳಿದರು.

Exit mobile version