Site icon Suddi Belthangady

ಮೊಗ್ರು: ದಯಾನಂದ ಗೌಡರ ಚಿಕಿತ್ಸೆಗೆ ಬೇಕಾಗಿದೆ ನೆರವು

ಮೊಗ್ರು: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಎರ್ಮಳ ನಿವಾಸಿಯಾದ ದಯಾನಂದ ಗೌಡ ಬೇರಿಕೆ ಎಂಬುವರು ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದರು. ಅ.4ರಂದು ಮನೆ ಸಮೀಪದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹುಲ್ಲು ತೆಗೆಯುವ ಯಂತ್ರದ ಬ್ಲೇಡ್ ತುಂಡಾಗಿ ಕಾಲಿಗೆ ತಾಗಿ ತುಂಡಾಗಿದ್ದು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗಾಗಲೇ 2.5ಲಕ್ಷಕ್ಕಿಂತ ಅಧಿಕ ಖರ್ಚಾಗಿದ್ದು ಹೆಚ್ಚಿನ ಚಿಕಿತ್ಸೆಗೆ 7ಲಕ್ಷ ರೂ.ಖರ್ಚು ಆಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ದಯಾನಂದ ಗೌಡ ಬಡತನ ಕುಟುಂಬವಾಗಿದ್ದು ಮನೆಯ ಆಧಾರಸ್ತಂಭವಾಗಿದ್ದರು. ತಂದೆ-ತಾಯಿ ಇಬ್ಬರು ಅಸಾಹಯಕರಾಗಿದ್ದಾರೆ. ನೆರೆ ಹೊರೆಯವರು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದು, ಸಹೃದಯಿ ಬಾಂಧವರು ಚಿಕಿತ್ಸೆಗೆ ನೆರವಾಗಬೇಕು ಎಂದು ಮನೆಯವರು ವಿನಂತಿಸಿದ್ದಾರೆ.

Exit mobile version