Site icon Suddi Belthangady

ಗುರುವಾಯನಕೆರೆ: ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

ಗುರುವಾಯನಕೆರೆ: ಇಲ್ಲಿಯ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಅ.17ರಂದು ಚಂಡಿಕಾ ಹೋಮ ಹಾಗೂ ಮೃತ್ಯುಂಜಯ ಹೋಮ ನಡೆಯಲಿದೆ. ದೈವಸ್ಥಾನ ಬ್ರಹ್ಮ ಕುಂಭಾಭಿಷೇಕದ ಪೂರ್ವಭಾವಿಯಾಗಿ ನಡೆಸಲಾದ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿರುವಂತೆ ಕುವೆಟ್ಟು, ಓಡಿಲ್ನಾಳ, ಪಡಂಗಡಿ, ಸೋಣಂದೂರು ಹಾಗೂ ಮೇಲಂತಬೆಟ್ಟು ಗ್ರಾಮಗಳ ದೋಷ ಪರಿಹಾರಾರ್ಥವಾಗಿ ಹೋಮ ನಡೆಯಲಿದೆ.

ಈ ಪ್ರಯುಕ್ತವಾಗಿ ಈ ಐದು ಗ್ರಾಮದ ಗ್ರಾಮಸ್ಥರು ಊರಿನ ಅಭಿವೃದ್ದಿಗೋಸ್ಕರ ಮುಷ್ಟಿ ಕಾಣಿಕೆ ಹಾಕಬೇಕು ಅನ್ನುವ ಕುರಿತಾಗಿಯೂ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು, ಈಗಾಗಲೇ ಜನರ ಸುಭೀಕ್ಷೆಗಾಗಿ ದೈವಭಕ್ತರು ಸ್ವಯಂಸೇವಕರಾಗಿ ಗ್ರಾಮದ ಪ್ರತಿ ಮನೆಗೆ ಹೋಗಿ ಮುಷ್ಟಿ ಕಾಣಿಕೆ ಸಂಗ್ರಹ ಮಾಡಿರುತ್ತಾರೆ. ಅವರು ಬರಲಾಗದ ಮನೆಯವರು ಅ.17ರಂದು ಮುಷ್ಟಿ ಕಾಣಿಕೆ ಹಾಕಬಹುದು ಅನ್ನುವುದಾಗಿ ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Exit mobile version