Site icon Suddi Belthangady

ಉರುವಾಲು: ಎಸ್ ಎಸ್ ಎಫ್ ಸೆಕ್ಟರ್ ಸಾಹಿತ್ಯೋತ್ಸವ

ಉರುವಾಲು: ಸುನ್ನೀ ಸ್ಟೂಡೆಂಟ್ ಫೆಡರೇಶನ್ ಸೆಕ್ಟರ್ ಸಾಹಿತ್ಯೋತ್ಸವ ಕಾರ್ಯಕ್ರಮ ಅ.12ರಂದು ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ಉರುವಾಲು ಪದವು ಮಸೀದಿ ವಠಾರದಲ್ಲಿ ಜರಗಿತು. ಜಮಾಅತ್ ಅಧ್ಯಕ್ಷ ಕೆ.ವಿ.ಅಬ್ದುಲ್ ಹಮೀದ್ ಧ್ವಜಾರೋಹಣ ನೆರವೇರಿಸಿದರು. ಉರುವಾಲು ಮಸೀದಿಯ ಖತೀಬರಾದ ಮಸ್ಹೂದ್ ಹಿಮಮಿ ಕಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.

ಇಬ್ರಾಹಿಂ ಮದನಿ ಉಸ್ತಾದ್, ಎಸ್ ಎಸ್ ಎಫ್ ಅಧ್ಯಕ್ಷ ಶಿಹಾಬ್ ನಿನ್ನಿಕಲ್ಲು, ಉರುವಾಲು ಮದರಸದ ಮುಅಲ್ಲಿಮರಾದ ನೌಫಲ್ ಮರ್ಝೂಕಿ, ಫಾರೂಖ್ ಸ ಅದಿ. ಹನೀಫ್ ಮದನಿ, ಉರುವಾಲು ಪದವು ಕೆ ಎಂ ಜೆ ಅಧ್ಯಕ್ಷ ಕಾಸಿಂ ಪೀರ್ಯ, ಉರುವಾಲು ಸರ್ಕಲ್ ಎಸ್ ವೈ ಎಸ್ ಅಧ್ಯಕ್ಷ ರಫೀಕ್ ಝೈನಿ, ಮುಹಮ್ಮದ್ ಸಖಾಫಿ ಉರುವಾಲು, ಎಸ್ ಎಸ್ ಎಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಯು.ಪಿ. ಹಾಗೂ ಜಮಾಅತ್ ನಾಯಕರು, ಕೆ ಎಂ ಜೆ ನಾಯಕರು, ಎಸ್ ವೈ ಎಸ್ ನಾಯಕರು, ಎಸ್ ಎಸ್ ಎಫ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸೆಕ್ಟರ್ ಕಾರ್ಯದರ್ಶಿ ನಿಜಾಮುದ್ದೀನ್ ಪದ್ಮುಂಜ ಸ್ವಾಗತಿಸಿ, ಹನೀಫ್ ರಝ್ವಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ರಿಯಾಝ್ ಮುರ ಧನ್ಯವಾದ ಸಲ್ಲಿಸಿದರು.

Exit mobile version