Site icon Suddi Belthangady

ಗುರುವಾಯನಕೆರೆ: ಶಕ್ತಿನಗರದಲ್ಲಿ ದೇವು ವುಡ್ ಇಂಟೀರಿಯ‌ರ್ ಶುಭಾರಂಭ

ಗುರುವಾಯನಕೆರೆ: ಗಂಗಾಧರ ಆಚಾರ್ಯರವರ ಮಾಲಕತ್ವದ ನೂತನ ಸಂಸ್ಥೆಯಾದ ದೇವು ವುಡ್ ಇಂಟೀರಿಯರ್ ಅ.12ರಂದು ಗುರುವಾಯನಕೆರೆ ಕೆಪಿಟಿಸಿಎಲ್ ಹತ್ತಿರ ಶಕ್ತಿನಗರದಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ್ ಶೆಟ್ಟಿ ಉದ್ಘಾಟಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ, ಕಳಿಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಬಾಲಕೃಷ್ಣ ಬಿರ್ಮೊಟ್ಟು, ಸುದ್ದಿ ವ್ಯವಸ್ಥಾಪಕ ಮಂಜುನಾಥ ರೈ, ಉದ್ಯಮಿ ಸಂತೋಷ್ ಹೆಗ್ಡೆ, ಕಿರಣ್ ಕುಮಾರ್ ಶೆಟ್ಟಿ, ಇಂಜಿನಿಯರ್ ಪ್ರಸನ್ನ ಉಮೇಶ್ ಮನು ಸ್ಟುಡಿಯೋ, ವಿಜಯ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ, ಗುರುವಾಯನಕೆರೆ ಸೇವಾ ಸಹಕಾರಿ ಸೊಸೈಟಿ ನಿರ್ದೇಶಕ ಶಶಿರಾಜ್ ಶೆಟ್ಟಿ, ಕುವೆಟ್ಟು ಗ್ರಾ.ಪಂ. ಸದಸ್ಯ ಪ್ರದೀಪ್ ಶೆಟ್ಟಿ, ಮಾಲಕರ ಮಾತಾ-ಪಿತರು ಉಪಸ್ಥಿತರಿದ್ದರು.

ಅತಿಥಿಗಳನ್ನು ಗಂಗಾಧರ ಆಚಾರ್ಯ ದಂಪತಿ ಸ್ವಾಗತಿಸಿ, ಸತ್ಕರಿಸಿದರು.

ಅಂಗಡಿ, ಮನೆ, ಶೋರೂಂಗಳಿಗೆ ವುಡ್, ಫ್ಲೈವುಡ್, ಯು ಪಿವಿಸಿ ಡೋರ್, ವಿಂಡೋಸ್ ಒಳ ವಿನ್ಯಾಸ ಮಾಡಿಕೊಡಲಾಗುವುದೆಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Exit mobile version