Site icon Suddi Belthangady

ಕಾಂಗ್ರೆಸ್‌ನಿಂದ ಉಸ್ತುವಾರಿಗಳ ನೇಮಕ

ವಿಧಾನ ಪರಿಷತ್‌ನ ಉಡುಪಿ ಜಿಲ್ಲೆಯನ್ನೊಳಗೊಂಡ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ಅ.೨೧ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಉಸ್ತುವಾರಿಗಳ ನೇಮಕ ಮಾಡಿದೆ. ಜಿಲ್ಲಾ ಪಂಚಾಯತ್ ಕ್ಷೇತ್ರಾವಾರು ಉಸ್ತುವಾರಿಗಳಾಗಿ ಧರಣೇಂದ್ರ ಕುಮಾರ್ (ನಾರಾವಿ), ಶೇಖರ್ ಕುಕ್ಕೇಡಿ (ಅಳದಂಗಡಿ), ನಾರಾಯಣ ಗೌಡ ದೇವಸ್ಯ (ಲಾಯಿಲ), ನಮಿತಾ ಪೂಜಾರಿ (ಉಜಿರೆ), ಸೆಬಾಸ್ಟಿಯನ್ ಪಿ.ಟಿ. (ಧರ್ಮಸ್ಥಳ), ಕೆ.ಕೆ ಶಾಹುಲ್ ಹಮೀದ್ (ಕಣಿಯೂರು), ಸುಭಾಶ್ ಚಂದ್ರ ರೈ (ಕುವೆಟ್ಟು) ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

Exit mobile version