Site icon Suddi Belthangady

ರೆಖ್ಯ: ಲಾವತ್ತಡ್ಕದಲ್ಲಿ ಪ್ರಪಾತಕ್ಕೆ ಉರುಳಿದ ಖಾಸಗಿ ಬಸ್- ಚಾಲಕ ಭರತ್ ಮೃತ್ಯು

ರೆಖ್ಯ: ಗ್ರಾಮದ ಲಾವತ್ತಡ್ಕ ಎಂಬಲ್ಲಿ ಧರ್ಮಸ್ಥಳದಿಂದ ಸುಬ್ರಮಣ್ಯ ತೆರಳಿ ಅಲ್ಲಿಂದ ಬೆಂಗಳೂರು ತೇರಳಬೇಕಿದ್ದ ಕುಕ್ಕೆಶ್ರೀ ಟ್ರಾವೆಲ್ಸ್ ನ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 40ರಿಂದ 50ಅಡಿ ಆಳ ಪ್ರದೇಶಕ್ಕೆ ಬಿದ್ದಿದ್ದು ಬೀಳುವ ರಭಸಕ್ಕೆ ಚಾಲಕ ಭರತ್ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಈ ಘಟನೆ ಮುಂಜಾನೆ ನುಸುಕಿನ ಜಾವ ಸಂಭವಿಸಿದ್ದು ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಮಾತ್ರ ಇದ್ದು ಬೇರೆ ಯಾರು ಇಲ್ಲದೆ ಇದ್ದುದರಿಂದ ಮುಂದೆ ನದಿ ಕೂಡ ಇದ್ದುದರಿಂದ ನದಿ ತಟದವರೆಗೆ ಬಸ್ಸು ಉರುಳಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

Exit mobile version