Site icon Suddi Belthangady

ದಿಡುಪೆ, ಚಾರ್ಮಾಡಿ, ನೆರಿಯ ರೀತಿಯಲ್ಲೇ ಶಿಶಿಲದಲ್ಲೂ ದಿಢೀರ್ ನೆರೆ- ಕಿಂಡಿ ಆಣೆಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು ಕಾರ್ಯ

ಶಿಶಿಲ: ಘಟ್ಟ ಪ್ರದೇಶದಲ್ಲಿ ಅ.8ರಂದು ಸುರಿದ ಭಾರಿ ಮಳೆಯಿಂದಾಗಿ ರಾತ್ರಿ ಶಿಶಿಲ ದೇವಳದ ಅಂಗಣದವರೆಗೂ ನೀರು ಬಂದಿದ್ದು ಕಿಂಡಿ ಆಣೆಕಟ್ಟು ಸ್ವಲ್ಪ ಹೊತ್ತು ಸಂಪೂರ್ಣ ಮುಳುಗಡೆಗೊಂಡಿದ್ದು ತದನಂತರ ನಿಧಾನವಾಗಿ ನೀರಿನ ಹರಿವು ಇಳಿಮುಖ ಗೊಂಡಿದೆ.

ಒಮ್ಮೆಲೇ ಉಂಟಾದ ಪ್ರವಾಹದಿಂದ ತೇಲಿಕೊಂಡು ಬಂದ ಮರದ ದಿಮ್ಮಿಗಳು ಕಿಂಡಿ ಆಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದು ಅ 11ರಂದು ಪಂಚಾಯತ್ ವತಿಯಿಂದ ಅಧ್ಯಕ್ಷರಾದ ಸುಧೀನ್ ಡಿ ಅವರ ನಿರ್ದೇಶನದಲ್ಲಿ ಹಿಟಾಚಿ ಮೂಲಕ ಮರದ ತುಂಡುಗಳನ್ನ ತೆರವು ಮಾಡಲಾಯಿತು.

Exit mobile version