Site icon Suddi Belthangady

ಧರ್ಮಸ್ಥಳ ಸಹಕಾರ ಸಂಘದ ರೈತ ಸದಸ್ಯರು ಕಡಮ್ಮಾಜೆ ಫಾರ್ಮ್ ಗೆ ಭೇಟಿ- ತರಬೇತಿ ಕಾರ್ಯಗಾರ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸದಸ್ಯರು ಕಡಮ್ಮಾಜೆ ಫಾರ್ಮ್ ಗೆ ಭೇಟಿ ನೀಡಿದರು. ಅಲ್ಲಿ ರೈತ ಸದಸ್ಯರಿಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಯಿತು.

ಈ ಕಾರ್ಯಾಗಾರದಲ್ಲಿ ಸುಮಾರು 96 ಸದಸ್ಯರು ಭಾಗವಹಿಸಿ ಅಲ್ಲಿಯ ಎಲ್ಲಾ ಸಾಕಾಣಿಕೆ ಹಾಗೂ ಸಾವಯವ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.

ಸಂಘದ ಅಧ್ಯಕ್ಷ ಪ್ರೀತಮ್ ಡಿ., ಉಪಾಧ್ಯಕ್ಷ ಅಜಿತ್ ಜೈನ್, ನಿರ್ದೇಶಕರುಗಳಾದ ನೀಲಕಂಠ ಶೆಟ್ಟಿ, ಶಾಂಭವಿ ರೈ, ಉಮಾನಾಥ್, ಶೀನ, ಧನಲಕ್ಷ್ಮೀ ಜನಾರ್ದನ, ಪ್ರಸನ್ನ, ಚಂದ್ರಶೇಖರ್, ವಿಕ್ರಮ್, ತಂಗಚ್ಚನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಧರ, ಸಿಬ್ಬಂದಿಗಳು, ಸದಸ್ಯರು ಭಾಗವಹಿಸಿದ್ದರು.

Exit mobile version