Site icon Suddi Belthangady

ನೆರಿಯ ಸೇತುವೆ ಮುಳುಗಡೆ: ಅಣಿಯೂರು‌ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆ

ನೆರಿಯ:  ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ‌ ನೆರಿಯ ಸೇತುವೆ ಮುಳುಗಡೆಯಾಗಿದೆ. ಈ ಹಿನ್ನೆಲೆ ಅಣಿಯೂರು ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆ ಆಗಿದೆ. ನೆರಿಯ ಸೇತುವೆ ಮುಳುಗಡೆಯಾಗಿ ಒಮ್ಮೆಲೇ ನೀರು ಹರಿದು ಬಂದಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಇದು ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಕಾಟಾಜೆ  ದೇವಸ್ಥಾನದಲ್ಲಿ  ನವರಾತ್ರಿ ಪೂಜೆ ನಡೆಯುತ್ತಿದ್ದು ಇದೀಗ  ಅಣಿಯೂರು ಕಾಟಾಜೆ ರಸ್ತೆ ಸಂಪರ್ಕ ಕಡಿತ ಗೊಂಡಿದೆ. ಅದೇ ರೀತಿ ಬಾಂದಡ್ಕ ಎಂಬಲ್ಲಿ ಕಿರು ಸೇತುವೆ ಮುಳುಗಡೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಇದೇ ಗ್ರಾಮದ ಕೋಲ್ನ ಎಂಬಲ್ಲಿಯೂ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ದೆಪ್ಪಾಡಿ ಸೇತುವೆಯಲ್ಲಿ ಭಾರಿ ಗಾತ್ರದ ಮರಗಳು ಸಿಲುಕಿರುವ ಕಾರಣ ಸೇತುವೆ ಮುಳುಗಡೆಯಾಗಿ ಪುಲ್ಲಾಜೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ,

Exit mobile version