Site icon Suddi Belthangady

ಕನ್ಯಾಡಿ: ಗುತ್ತಿನ ಮನೆಯ ಅಚ್ಯುತ್ತ ರಾವ್ ಮತ್ತಿಲ ನಿಧನ

ಧರ್ಮಸ್ಥಳ: ಗ್ರಾಮದ ಕನ್ಯಾಡಿಯ ಹಿರಿಯ ಕೃಷಿಕರು ಗ್ರಾಮದ ಗುತ್ತಿನ ಮನೆಯ ಮುಖ್ಯಸ್ಥರಾದ ಅಚ್ಯುತ್ತ ರಾವ್ ಮತ್ತಿಲ (81 ವರ್ಷ) ಇವರು ಅಕ್ಟೋಬರ್ 7ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಧರ್ಮಸ್ಥಳದ ರಥಬೀದಿಯ ಹಿರಿಯ ವ್ಯಾಪಾರಿಯಾಗಿದ್ದ ಇವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.ಪತ್ನಿ ಅನ್ನಪೂರ್ಣ, ಮಕ್ಕಳಾದ ಗುರುರಾಜ್, ವಿದ್ಯಾಧರ್, ಶಶಿಧರ್ ಮತ್ತು ಮಗಳಾದ ಮಾಧವಿ ಅವರನ್ನು ಅಗಲಿದ್ದಾರೆ.

ಮೃತರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ (ಇಂದು)ಅಕ್ಟೋಬರ್ 8ರಂದು ಬೆಳಿಗ್ಗೆ 11 ಗಂಟೆಯ ತನಕ ಅವಕಾಶವಿದೆ.

Exit mobile version