Site icon Suddi Belthangady

ರಾಜ ಕೇಸರಿ ಬಸವನಬೈಲು, ನೆಲ್ಲಿಗುಡ್ಡೆ ಬಸವನಬೈಲು ಮಹಿಳಾ ಘಟಕ ಉದ್ಘಾಟಿಸಿದ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ

ಬೆಳ್ತಂಗಡಿ: ರಾಜ ಕೇಸರಿ ಬಸವನಬೈಲು ನೆಲ್ಲಿಗುಡ್ಡೆ, ಬಸವನಬೈಲು ಮಹಿಳಾ ಘಟಕ ಉದ್ಘಾಟಿಸಿದ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ರಾಜ ಕೇಸರಿ ಮಹಿಳಾ ಘಟಕದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ರಕ್ಷೆ ಕಟ್ಟುವ ಮೂಲಕ ರಾಜ ಕೇಸರಿ ಸಂಘಟನೆಗೆ ಸೇರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ನೆಲ್ಲಿಗುಡ್ಡೆ ಬಸವನಬೈಲು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅನಿತಾ ಬಸವನಬೈಲು, ಉಪಾಧ್ಯಕ್ಷರಾಗಿ ನಾಳಿನಾಕ್ಷಿ ಅರ್ಬಿ, ಸಂಚಾಲಕರಾಗಿ ಪೂರ್ಣಿಮ ನಡ್ಡೋಡಿ, ಸಹ ಸಂಚಾಲಕರಾಗಿ ನಿಮಿತಾ ನೆಲ್ಲಿಗುಡ್ಡೆ, ಪ್ರದಾನ ಕಾರ್ಯದರ್ಶಿಯಾಗಿ ಭಾಗ್ಯಶ್ರೀ ಉಡುಪಿ, ಸಂಘಟನೆ ಕಾರ್ಯದರ್ಶಿ ಸವಿತಾ ನೆಲ್ಲಿಗುಡ್ಡೆ, ಜೂತೆ ಕಾರ್ಯದರ್ಶಿ ಶಶಿಕಲಾ, ಕೋಶಾಧಿಕಾರಿ ವರ್ಷ, ಸಾಮಾಜಿಕ ಜಾಲತಾಣ ಜಯಸ್ಥಿತ ಗೌತಮ್, ಸದಸ್ಯರಾಗಿ ಸೌಮ್ಯ ಉಡುಪ, ಲತಾ, ಕುಸುಮಾವತಿ, ಶೋಭಾ ನದ್ದೋಡಿ, ರೂಪ ಸಂತೋಷ್ ನೆಲ್ಲಿಗುಡ್ಡೆ, ಹೇಮಲತಾ ನಡೋಡಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಬಂಟ್ವಾಳ ‌ತಾಲೂಕು ಅಧ್ಯಕ್ಷರಾದ ಗೌತಮ್ ಪೂಜಾರಿ ಹಾಗೂ ಬಂಟ್ವಾಳ ತಾಲೂಕಿನ ಬಸವನಬೈಲು ನೆಲ್ಲಿಗುಡ್ಡೆ ಇದರ ನಿಕಟ ಪೂರ್ವ ಅಧ್ಯಕ್ಷ ಪುರುಷೋತ್ತಮ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version