Site icon Suddi Belthangady

ಬೆಳ್ತಂಗಡಿ: ಕ್ಯಾನ್ಸರ್ ಸಂತ್ರಸ್ತೆ ಶ್ರಾವ್ಯಾ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ನೆರವು

ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿ ಸಮೀಪದ ಕಾರ್ಯಡ್ಕ ಜನಾರ್ದನ ಪೂಜಾರಿ – ರೇವಾತಿ ದಂಪತಿ ಪುತ್ರಿ 23 ವರ್ಷ ವಯಸ್ಸಿನ ಶ್ರಾವ್ಯಾ ಜೆ.ಎಂ. ಕ್ಯಾನ್ಸರ್ (ಗರ್ಭಕಂಠದ ಇವಿಂಗ್ಸ್ ಸಾರ್ಕೊಮ) ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚಕ್ಕಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.

ಬದುಕಿನಲ್ಲಿ ಗುರಿ ಇಟ್ಟು, ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರಾವ್ಯಾ, ಬಿಎಸ್ಸಿಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆ ಹೊಂದಿದ್ದರು. ಕ್ಯಾನ್ಸರ್‌ಗೆ ಒಳಗಾಗಿರುವುದು ದೃಢಪಟ್ಟರೂ, ಛಲ ಬಿಡದೆ ಅನಾರೋಗ್ಯ ಸಂದರ್ಭದಲ್ಲಿಯೂ ಪರೀಕ್ಷೆಗೆ ಹಾಜರಾಗಿ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಕೆಲದಿನಗಳಿಂದ ಮಂಗಳೂರಿನ ಎಂ.ಐ.ಒ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ 3 ಲಕ್ಷ ರೂ. ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಸಾಲ ಮಾಡಿ ಖರ್ಚು ಮಾಡಿರುವ ಬಡಕುಟುಂಬಕ್ಕೆ ದಿಕ್ಕು ತೋಚದಂತಾಗಿದ್ದು, ಸಹೃದಯಿ ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ತಂದೆ-ತಾಯಿ ಮನವಿ ಮಾಡಿದ್ದಾರೆ. ಸ್ಥಳೀಯರು ವಾಟ್ಸಾಪ್ ಗ್ರೂಪ್ ರಚಿಸಿ ಶ್ರಾವ್ಯಾರ ಚಿಕಿತ್ಸೆಗೆ ನೆರವಾಗಲು ವಿನಂತಿಸುತ್ತಿದ್ದಾರೆ. ಧನಸಹಾಯ ಮಾಡುವವರು 9482308372(ಶ್ರಾವ್ಯಾ ಪೂಜಾರಿ) ಈ ನಂಬರ್‌ಗೆ ಗೂಗಲ್ ಪೇ ಮಾಡಬಹುದು.

Exit mobile version