Site icon Suddi Belthangady

ಉಜಿರೆಯಲ್ಲಿ ಸ್ವಾಸ್ಥ್ಯಮ್ ಆಯುರ್ವೇದಿಕ್ ಕ್ಲಿನಿಕ್ ಉದ್ಘಾಟನೆ

ಉಜಿರೆ: ಇಲ್ಲಿಯ ಮುಖ್ಯ ರಸ್ತೆಯ ಎಸ್.ಕೆ. ಮೆಮೋರಿಯಲ್ ಹಾಲ್ ಕಟ್ಟಡದಲ್ಲಿ ಸ್ವಾಸ್ಥ್ಯಮ್ ಆಯುರ್ವೇದಿಕ್ ಕ್ಲಿನಿಕ್ ಅ.6ರಂದು ಉದ್ಘಾಟನೆಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಯು.ಶರತ್ ಕೃcಷ್ಣ ಪಡುವೆಟನ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಕಾಲೇಜು ಡೀನ್ ವಿಶ್ವನಾಥ್ ಪಿ., ಅಚ್ಚುತ ಅಂಚನ್, ಗೀತಾ ಅಂಚನ್, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಹೇರಾಜೆ, ಗಂಗಾಧರ ಮಿತ್ತಮಾರು, ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಾಲಕೃಷ್ಣ ಗೌಡ, ಡಾ.ಪ್ರಕಾಶ್ ಪ್ರಭು, ವಕೀಲ ಗೋಪಾಲ ಕೃಷ್ಣ ಕೆ., ಅಭಿನಂದನ್ ಹರೀಶ್ ಕುಮಾರ್, ಟಿ.ಜೆ.ಮೋರಸ್, ಸುರಕ್ಷಾ ಮೆಡಿಕಲ್ ಶ್ರೀಧರ್ ಕೆ.ವಿ., ಬಿ.ಎಂ. ಮೆಡಿಕಲ್ ರಮಾನಂದ ಮೊದಲಾದ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.

ಸೂರ್ಯನಾರಾಯಣ, ವಿನಯ, ಡಾ.ರಿಖಿತಾ ಸುಶೀಲ್, ಸುಶೀಲ್ ಕುಮಾರ್, ಸುಧೀಕ್ಷಾ, ಚಿರಾಗ್ ಸ್ವಾಗತಿಸಿ ಗೌರವಿಸಿದರು.

Exit mobile version