Site icon Suddi Belthangady

ಎರುಕಡಪ್ಪು: ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ

ಮಡಂತ್ಯಾರು: ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ಬಾಲವಿಕಾಸ ಸಮಿತಿ ಎರುಕಡಪ್ಪು ಅಂಗನವಾಡಿ ಕೇಂದ್ರ ಜಂಟಿ ಆಶ್ರಯದಲ್ಲಿ ಅ.4ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು.

ಆಶಾ ಕಾರ್ಯಕರ್ತೆ ಸುಭಾಷಿಣಿ ಕೆ.ಆರೋಗ್ಯ ಮಾಹಿತಿ ನೀಡಿದರು.ಬಾಲ ವಿಕಾಸ ಸಮಿತಿ ಅಧ್ಯಕ್ಷೆ ನೀತಾ ಸತೀಶ್, ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮ ನಾಯ್ಕ, ಧನಶ್ರೀ, ಲತಾಲಾಕ್ಷಿ, ಸ್ವಾಬೀರ, ಅಫ್ಸ ಭಾನು, ಹಭೀಬ, ಮಿಶ್ರಿಯಾ, ಸೌಮ್ಯ, ಬಾಬಿನ, ಗೀತಾ, ಜೋಹರಾಭಿ, ಸಂಶದ್, ಹಸೀನಾ ಭಾನು, ಆಯಿಷಾ, ಶೈತ್ರಾ, ಮುಫೀದಾ, ಸಾಕೀರಾ, ಝಬೈದಾ, ಲಿಲ್ಲಿ ಮೊರಾಸ್, ಸುಂದರಿ ಮತ್ತು ಜಾಕು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್. ಸ್ವಾಗತಿಸಿ, ವಂದಿಸಿದರು. ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳಿಗೆ ಹಳೆ ವಿಧ್ಯಾರ್ಥಿ ಮಹಮ್ಮದ್ ಸಾಬೀತ್ ಪ್ರೋತ್ಸಾಹ ಬಹುಮಾನಗಳನ್ನು ನೀಡಿದರು.

Exit mobile version