Site icon Suddi Belthangady

ಶಿಶಿಲ: ನವರಾತ್ರಿ ಪ್ರಯುಕ್ತ ಕುಣಿತ ಭಜನಾ ಸಪ್ತಾಹ ಶುಭಾರಂಭ

ಶಿಶಿಲ: ವೈಕುಂಠಪುರ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವದ ಪ್ರಯುಕ್ತ ದಿ.ಶ್ರೀನಿವಾಸ ಇಂದಬೆಟ್ಟು ಸ್ಮರಣಾರ್ಥ ಕುಣಿತ ಭಜನಾ ಸಪ್ತಾಹ ಅ.4ರಂದು ಶುಭಾರಂಭಗೊಂಡಿತು.

ಮೊದಲ ದಿನದ ಭಜನಾ ಸೇವೆಯನ್ನು ಶ್ರೀ ಸಿದ್ದಿವಿನಾಯಕ ಭಜನಾಮಂಡಳಿ ಹೊಸ್ತೋಟ ಅರಸಿನಮಕ್ಕಿ ಇದರ ಸದಸ್ಯರು ನಡೆಸಿಕೊಟ್ಟರು.

ಆಡಳಿತ ಮಂಡಳಿ ಪರವಾಗಿ ಭಜನಾ ಮಂಡಳಿ ಸದಸ್ಯರನ್ನು ಶಾಲು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

Exit mobile version