Site icon Suddi Belthangady

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಗಾಂಧಿಜಯಂತಿ ಆಚರಣೆ ಕಾರ್ಯಕ್ರಮ

ಬೆಳ್ತಂಗಡಿ: ಮುಗುಳಿ ಅಂಗನವಾಡಿಯಲ್ಲಿ ಸಂಭ್ರಮದ ಗಾಂಧಿಜಯಂತಿ ಆಚರಣೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪಾರ್ವತಿ ನೆರವೇರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕುಮುದಾಕ್ಷ ಸಿಂಚನ ಬ್ಯಾಂಕ್‌ನ ಕಾರ್ಯನಿವಹಣಾಧಿಕಾರಿ, ಇವರು ಗಾಂಧಿಜಯಂತಿ ಆಚರಣೆಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸನತ್ ಕುಮಾರ್ ಜೈನ್ ಮುಗುಳಿ ಇವರು ಕಾರ್‍ಯಕ್ರಮದ ಬಗ್ಗೆ ಮಾತನಾಡಿ, ಗಾಂಧೀಜಿ ಉಳಿಸಿಕೊಟ್ಟ ಸ್ವಾತಂತ್ರ್ಯವನ್ನು ದೇಶ ನಮಗೇನು ಕೊಟ್ಟಿದೆ ಎನ್ನುವುದನ್ನು ಮರೆಯದೇ ದೇಶಕ್ಕಾಗಿ ನಾವು ಏನು ಕೊಡುಬಹುದು ಎನ್ನುವುದನ್ನು ಚಿಂತನೆ ಮಾಡಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಅಂಗನವಾಡಿ ವಠಾರದಲ್ಲಿ ಸ್ವಚ್ಚ ಭಾರತ ಕಾರ್‍ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಸದಸ್ಯರುಗಳಾದ ವಂದನ ಲ್ಯಾಬಿನ ಮಾಲಕರಾದ ಸವಿತಾ, ರೇಖಾ, ಅಶೋಕ, ತಣ್ಣೀರುಪಂತ ಗ್ರಾಮ ಪಂಚಾಯತ್‌ನ ಗ್ರಂಥ ಮೇಲ್ವಿಚಾರಕಿ ಮೋಹಿನಿ, ಮಕ್ಕಳ ತಾಯಂದಿರು ಹಾಗೂ ಪುಟಾಣಿ ಮಕ್ಕಳು ಬಾಗವಹಿಸಿದರು.

ಪದ್ಮಾವತಿ.ಕೆ ಅಂಗನವಾಡಿ ಕಾರ್ಯಕರ್ತೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ಧನ್ಯವಾದವಿತ್ತರು. ಭಾರತಿ ಸಹಾಯಕಿ ಸಹಕರಿಸಿದರು.

Exit mobile version