Site icon Suddi Belthangady

ಮಡಂತ್ಯಾರಿನಲ್ಲಿ ಸಾನಿಧ್ಯ ಜ್ಯುವೆಲ್ಲರೀಸ್ ಶುಭಾರಂಭ: ಹವಾನಿಯಂತ್ರಿತವಾದ ಮಳಿಗೆ, ಚಿನ್ನ ಖರೀದಿಯ ಅನುಕೂಲಕ್ಕಾಗಿ ಸುಲಭ ಕಂತಿನ ಉಳಿತಾಯ ಯೋಜನೆ ಲಭ್ಯ

ಮಡಂತ್ಯಾರು: ಮಡಂತ್ಯಾರಿನ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ಸಾನಿಧ್ಯ ಜ್ಯುವೆಲ್ಲರೀಸ್ ಅ.3ರಂದು ಉದ್ಘಾಟನೆಗೊಂಡಿತು. ಭವಾನಿ ರಮೇಶ್ ಆಚಾರ್ಯ ದೀಪ ಬೆಳಗಿಸಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಜೋಸೆಫ್ ಎನ್.ಎಂ., ಆರ್.ಕೆ. ಕಾಂಪ್ಲೆಕ್ಸ್ ಮಡಂತ್ಯಾರು ಸುಂದರಿ ವೆಂಕಟೇಶ್,ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನಿತ್ ಮಡಂತ್ಯಾರು, ಶೇಖ್ ಜವಾಹ‌ರ್ ಆಲಿ ಶಮಾ ಕಾಂಪ್ಲೆಕ್ಸ್ ಮಡಂತ್ಯಾರು, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ದಿನಕರ್ ಅಂಕದಳ, ಮಹಾವೀರ ಮೆಡಿಕಲ್ ಮಾಲಕ ಉದಯ ಕುಮಾರ್ ಜೈನ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

ಸೌಲಭ್ಯಗಳು: ಮಳಿಗೆಯು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತದೆ, BSI 916 ಹಾಲ್‌ ಮಾರ್ಕಿನ ಆಭರಣಗಳನ್ನು ಕ್ಲಪ್ತ ಸಮಯದಲ್ಲಿ ತಯಾರಿಸಿಕೊಡಲಾಗುವುದು, ಅತೀ ಕನಿಷ್ಠ ಮಜೂರಿ ತೇಮಾನ್‌ನಲ್ಲಿ ಚಿನ್ನ, ಬೆಳ್ಳಿ ಆಭರಣಗಳನ್ನು ಮಾಡಿಕೊಡಲಾಗುವುದು, ಚಿನ್ನ, ಬೆಳ್ಳಿಯ ಗಿಫ್ಟ್ ಐಟಂಗಳು ಲಭ್ಯ, ಚಿನ್ನ ಖರೀದಿಯ ಅನುಕೂಲಕ್ಕಾಗಿ ಸುಲಭ ಕಂತಿನ ಉಳಿತಾಯ ಯೋಜನೆ ಕೂಡ ಲಭ್ಯ, ಇಲ್ಲಿ ವಿಶ್ವಕರ್ಮರಿಂದ ಶಾಸ್ರೋಕ್ತವಾಗಿ ತಯಾರಿಸಲ್ಪಟ್ಟ ಚಿನ್ನ, ಬೆಳ್ಳಿಯ ಆಭರಣಗಳು ಮತ್ತು ದೈವ-ದೇವರ ಆಭರಣಗಳನ್ನು ತಯಾರಿಸಿಕೊಡಲಾಗುವುದು.ಇಲ್ಲಿ ಖರೀದಿಸಿದ ಆಭರಣಗಳನ್ನು ಮರು ಖರೀದಿಗೆ ಅವಕಾಶವಿದೆ(ಯಾವುದೇ ಕಡಿತಗಳಿಲ್ಲದೆ) ಎಂದು ಮಾಲಕ ರಾಜೇಶ್ ಆಚಾರ್ಯ ಮತ್ತು ಸಹೋದರರು ತಿಳಿಸಿದ್ದಾರೆ.

Exit mobile version