Site icon Suddi Belthangady

ಅರಿಕೆಗುಡ್ಡೆ ವನದುರ್ಗ ದೇವಿ ಸನ್ನಿದಿಯಲ್ಲಿ ನವರಾತ್ರಿ ಸಂಭ್ರಮ: ನೂತನ ದೀಪಸ್ಥಂಭ ಉದ್ಘಾಟನೆ ಮತ್ತು ದೀಪ ಪ್ರಜ್ವಲನೆ

ಹತ್ಯಡ್ಕ: ಇತ್ತೀಚೆಗೆ ನೂತನವಾಗಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ನಡೆದು ಮೊದಲ ಬಾರಿಗೆ ನವರಾತ್ರಿ ಸಂಭ್ರಮದಲ್ಲಿರುವ ಭಕ್ತರ ಆಶಯವನ್ನು ಪೂರೈಸುತ್ತಿರುವ ವನದುರ್ಗ ಮಾತೆಯ ಪುಣ್ಯ ಸನ್ನಿಧಿಯಲ್ಲಿ ದೇವಳದಿಂದ ನಿರ್ಮಿಸಲ್ಪಟ್ಟ ನೂತನ ದೀಪಸ್ಥoಭದ ಉದ್ಘಾಟನೆ ಮತ್ತು ದೀಪ ಪ್ರಜ್ವಲನೆ ನವರಾತ್ರಿ ಮೊದಲನೇ ದಿನವಾದ ಅ.3ರಂದು ದೇವಿಯ ಸನ್ನಿದಿಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ದೇವಳದ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀರಂಗ ದಾಮ್ಲೆ, ಪದ್ಮಯ ಬಾರಿಗ, ಅರ್ಚಕ ಉಲ್ಲಾಸ್ ಭಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ನಿರತೆ ಯಮುನಾ, ಬಾಲಕೃಷ್ಣ ಶೆಟ್ಟಿ ಮುದ್ದಿಗೆ ಕವಿತ, ಹೇಮಾ ಹಾಗೂ ಊರವರು ಉಪಸ್ಥಿತರಿದ್ದರು.

Exit mobile version