Site icon Suddi Belthangady

ಭಾರತೀಯ ವಿದ್ಯಾರ್ಥಿ ಫೆಡರೇಶನ್ ರಾಜ್ಯ ಸಹಕಾರ್ಯದರ್ಶಿಯಾಗಿ ವಿನುಶ ರಮಣ ಆಯ್ಕೆ

ಬೆಳ್ತಂಗಡಿ: ಭಾರತ ವಿದ್ಯಾರ್ಥಿ ಪೆಡರೇಶನ್ ಕರ್ನಾಟಕ ರಾಜ್ಯ ಸಹಕಾರ್ಯದರ್ಶಿಯಾಗಿ ವಿನುಶ ರಮಣ ಆಯ್ಕೆಯಾಗಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ನಡೆದ ಎಸ್.ಎಫ್.ಐ. ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಯಿತು. ಕಾನೂನು ವಿದ್ಯಾರ್ಥಿಯಾಗಿರುವ ವಿನುಶರಮಣ ಅವರು ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಮತ್ತು ಸಿಪಿಐಎಂ ಮುಖಂಡರಾದ ಬಿ.ಎಂ.ಭಟ್ ಅವರ ಪುತ್ರ.

ಚಿಕ್ಕ ಪ್ರಾಯದಿಂದಲೇ ವಿದ್ಯಾರ್ಥಿಗಳ ಸಂಘಟನೆಗೆ ಗಮನ ನೀಡುತ್ತಾ ವಿದ್ಯಾರ್ಥಿ ಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ದ.ಕ. ಜಿಲ್ಲಾ ಸಮಿತಿ ಉಪಾಧ್ಯಕ್ಷರೂ ಆಗಿದ್ದಾರೆ.

Exit mobile version